ಕಲಬುರಗಿ –
ನಕಲಿ ಸಹಿ ಮಾಡಿ ರೈತರ ಹೆಸರಿನ ಮೇಲೆ ಸಾಲ ಪಡೆದ ಹಿನ್ನಲೆಯಲ್ಲಿ ಯಲಗೋಂಡ ಸಹಕಾರ ಸಂಘದ ಕಾರ್ಯದರ್ಶಿಯನ್ನ ಬಟ್ಟೆ ಕಳಚಿ ಮನಬಂದಂತೆ ಥಳಿಸಿದ ಘಟನೆ ಕಲಬುರಗಿ ಯಲ್ಲಿ ನಡೆದಿದೆ.
ಹೌದು ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ.ರಾಯಪ್ಪಗೌಡ, ಯಲ ಗೋಂಡ ಸಹಕಾರ ಸಂಘದ ಕಾರ್ಯದರ್ಶಿ ಯಾಗಿದ್ದು ರೈತರು ಇವರನ್ನು ಥಳಿಸಿದ್ದಾರೆ
ರೈತರ ಹೆಸರಿನ ಮೇಲೆ ನಕಲಿ ಸಹಿ ಮಾಡಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದರಂತೆ ರಾಯಪ್ಪಗೌಡ ಅವರು.ಈ ಬಗ್ಗೆ ದೂರು ನೀಡಿದ್ರು ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ರೈತರೇ ಬಟ್ಟೆಬಿಚ್ಚಿ ಥಳಿಸಿದ್ದಾರೆ.
ನಂತರ ಸ್ಥಳಕ್ಕೆ ಬಂದ ಪೊಲೀಸರ ಮಧ್ಯೆಸ್ಥಿಕೆ ಯಿಂದ ತಿಳಿಗೊಂಡಿತು ಪರಿಸ್ಥಿತಿ.ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು