ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸಮಿತಿಗೆ ಅಧ್ಯಕ್ಷರ ನೇಮಕಾತಿಯ ಬೆನ್ನಲ್ಲೇ ಈಗ ರಾಜ್ಯದ ಸರ್ಕಾರಿ ನೌಕರರು ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ಕೆಲ ಸೌಲಭ್ಯ ಗಳನ್ನು ನಮಗೂ ಕೋಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ ಹೌದು ಇನ್ನೂ ನೌಕರರ ಬೇಡಿಕೆಗಳ ಪಟ್ಟಿ ಕೂಡಾ ಹೆಚ್ಚಾಗಿದೆ
ಕೇಂದ್ರ ಸರ್ಕಾರದ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆ,ನಗರ ಪರಿಹಾರ ಭತ್ಯೆ ಹಾಗೂ ವಿಶೇಷ ಭತ್ಯೆ ಪರಿಷ್ಕರಣೆ ಮಾಡಬೇಕು,ವಿವಿಧ ಇಲಾಖಾ ವೃಂದಗಳ ವೇತನ ಶ್ರೇಣಿಯಲ್ಲಿನ ತಾರತಮ್ಯ ಸರಿಪಡಿಸಬೇಕು.25 ಲಕ್ಷ ಖಾಲಿ ಹುದ್ದೆ ಭರ್ತಿ ಮಾಡಬೇಕು.ಶೇ.40 ಫಿಟ್ಮೆಂಟ್ ಸೌಲಭ್ಯ ಸಿಗಬೇಕು
ಕಳೆದ ಆಯೋಗದ ಅವಧಿ ಮುಗಿದಲ್ಲಿಂದಲೇ ಕಾಲ್ಪನಿಕ ವೇತನ ಸೌಲಭ್ಯ ಕಲ್ಪಿಸಬೇಕು.ವೇತನ ಆಯೋಗ ರಚಿಸಿ ಸಿಎಂ ಬೊಮ್ಮಾಯಿ ನುಡಿ ದಂತೆ ನಡೆದಿದ್ದಾರೆ ಒಂದು ಕಡೆಗೆ ನಡೆದಿದ್ದಾರೆ ಸರಿ ಆದರೆ ಈ ಕಾರ್ಯದಲ್ಲಿ ಸಧ್ಯ ರಾಜ್ಯದ ಸರ್ಕಾರಿ ನೌಕರರು ಬೇಡಿಕೆ ಇಟ್ಟಿರುವ ಈ ಎಲ್ಲಾ ಬೇಡಿಕೆ ಗಳನ್ನು ಈಡೇರಿಸಬೇಕು ಎಂಬ ಕೂಗು ಜೋರಾ ಗುತ್ತಿದ್ದು ರಾಜ್ಯದ ಸರ್ಕಾರಿ ನೌಕರರ ಸಂಘವು ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ
ಇದರೊಂದಿಗೆ ವೇತನ ಆಯೋಗಕ್ಕೆ ಅಧ್ಯಕ್ಷರ ನೇಮಕದ ಬೆನ್ನಲ್ಲೇ ಮತ್ತಷ್ಟು ಬೇಡಿಕೆಗಳ ಪಟ್ಟಿ ಯನ್ನು ಸಧ್ಯ ರಾಜ್ಯದ ಸರ್ಕಾರಿ ನೌಕರರು ಮುಂದಿಟ್ಟಿದ್ದು ರಾಜ್ಯ ಸರ್ಕಾರಿ ನೌಕರರು – ಅವರ ಹಾಗೇ ನಮಗೂ ಕೂಡಾ ಇವುಗಳನ್ನು ಕೊಡಿ ಎಂದಿದ್ದು ಈ ಒಂದು ಬೇಡಿಕೆಗಳ ಪಟ್ಟಿಯನ್ನು ಸರ್ಕಾರ ಈಡೇರಿಸುತ್ತಾ ಹೇಗೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ – ರಕ್ಷೀತ್ ಜೊತೆಗೆ ಗೌತಮ್ ಸುದ್ದಿ ಸಂತೆ ನ್ಯೂಸ್ ಬೆಂಗಳೂರು.