ಹುಬ್ಬಳ್ಳಿ –
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಹುಬ್ಬಳ್ಳಿಯಲ್ಲಿ ಅರ್ಥಪೂರ್ಣವಾದ ಕಾರ್ಯ ಕ್ರಮವನ್ನು ಮಾಡಿದರು.ನಗರದ ನಾಗಶೆಟ್ಟಿಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಅರ್ಥ ಪೂರ್ಣವಾದ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಜಗದೀಶ ಶೆಟ್ಟರ ಚಾಲನೆ ನೀಡಿದರು.
ಇನ್ನೂ ಅವರ ಜನ್ಮ ದಿನದ ಅಂಗವಾಗಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂಥಹ ಸಮಾಜ ಮೆಚ್ಚುವ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದು ಶ್ಲಾಘನೀಯ ಮೆಚ್ಚುವಂತಹ ವಿಚಾರ ವೆಂದರು.
ಹಾಗೇ ಹೀಗೆ ವಿಶೇಷವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಕುರಿತಂತೆ ಅಭಿಮಾನಿಗಳ ಕಾರ್ಯವನ್ನು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಒಂದು ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಾವಕಾರ .ನಾಗೇಶ ಕಲಬುರ್ಗಿ ಶ್ರೀಮತಿ ಮೇಣಕಾ ಹುರುಳಿ.ಪ್ರವೀಣ ಹುರಳಿ, ಚಂದ್ರು ನೂಲ್ವಿ.ಮಣಿಕಂಠ ಶ್ಯಾಗೋಟಿ, ಮಂಜು ಹಳ್ಯಾಳ ಕಾಂತ ಪೂಜಾರ. ಮುತ್ತು ಪಾಟೀಲ. ನವೀನ್ ಮಾನೆ ಮತ್ತು ಊರಿನ ಗುರುಹಿರಿಯರು ಅಣ್ಣತಮ್ಮಂದಿರು ಅಕ್ಕ ತಂಗಿಯರು ಕಾರ್ಯ ಕರ್ತರು ಅಭಿಮಾನಿಗಳು ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.