ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ ವೇತನ,ಭತ್ಯೆ ಪರಿಷ್ಕರಣೆ,ಎನ್.ಪಿ.ಎಸ್.ರದ್ದು ಮಾಡಿ ಒಪಿಎಸ್ ಮರು ಜಾರಿ ಬಗ್ಗೆ ರಾಜ್ಯ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡದ ಹಿನ್ನೆಲೆಯಲ್ಲಿ ಹೋರಾಟ ನಡೆಸಲು ಸರ್ಕಾರಿ ನೌಕರರು ಮುಂದಾಗಿದ್ದಾರೆ.ಈ ಒಂದು ಕುರಿತು ಚರ್ಚೆ ಮಾಡಿ ಮುಂದಿನ ಹೋರಾಟದ ರೂಪುರೇಷೆ ಕುರಿತು ತೀರ್ಮಾನ ವನ್ನು ತಗೆದುಕೊಳ್ಳುವ ನಿಟ್ಟಿನಲ್ಲಿ ಫೆಬ್ರವರಿ 21 ರಂದು ಸಂಜೆ 5 ಗಂಟೆಗೆ ಕಬ್ಬನ್ ಪಾರ್ಕ್ ನಲ್ಲಿರುವ ನೌಕರರ ಸಂಘದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆ ಕರೆಯ ಲಾಗಿದೆ.
ವೇತನ ಪರಿಷ್ಕರಣೆ, ಎನ್.ಪಿ.ಎಸ್. ರದ್ದು ಮಾಡುವ ಬಗ್ಗೆ ನಿರೀಕ್ಷೆಯಲ್ಲಿದ್ದ ನೌಕರರಿಗೆ ಬಜೆಟ್ ನಿರಾಶದಾಯಕವಾಗಿದ್ದು ಹೋರಾಟ ಅನಿವಾರ್ಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ.
ಫೆಬ್ರವರಿ 21 ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ವೃಂದ ಸಂಘಗಳ ಅಧ್ಯಕ್ಷರು,ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ ನಡೆಸಿ ಮುಂದಿನ ಹೋರಾಟದ ರೂಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂಬ ಮಾತು ಗಳು ಈಗಾಗಲೇ ಕೇಳಿ ಬಂದಿವೆ.ಇನ್ನೂ ಪ್ರಮುಖ ವಾಗಿ ಇದಕ್ಕೂ ಮುನ್ನ ಸಚಿವ ಸಂಪುಟದ ಸಭೆ ಯನ್ನು ಕರೆಯಲಾಗಿದ್ದು ಇಲ್ಲಿ ಏನಾದರೂ ಚರ್ಚೆ ಆಗುತ್ತಾ ಎಂಬ ಕುರಿತು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..