ಬೆಂಗಳೂರು –
ರಾಜ್ಯದ ಶಿಕ್ಷಕರ ಗಮನಕ್ಕೆ KSPSTA ಸಂಘಟನೆ ಯವರು ಮಹತ್ವದ ಮಾಹಿತಿಯನ್ನು ರವಾನೆ ಮಾಡಿದ್ದಾರೆ.ಹೌದು ಈಗಾಗಲೇ ಮುಖ್ಯೋಪಾ ಧ್ಯಯ ಹುದ್ದೆಗಳ ಭಡ್ತಿ ಪ್ರಕ್ರಿಯೆ ತಾತ್ಕಾಲಿಕವಾಗಿ ನಿಂತಿದ್ದು ಕಾರಣ ರಾಜ್ಯ ಸರ್ಕಾರ ಇತ್ತಿಚೀಗೆ SC,ST ಮೀಸಲಾತಿ ವಿಚಾರ ಕುರಿತಂತೆ 15 ರಿಂದ 17 ಹಾಗೂ 3 ರಿಂದ 7 ಕ್ಕೆ ಹೆಚ್ಚಾಗಿರುವುದರಿಂದ ಭಡ್ತಿಯಲ್ಲಿ ರೋಸ್ಟರ್ ಗೆ ತಿದ್ದುಪಡಿ ಕಾರ್ಯ ನಡೆದಿರುವುದರಿಂದ ವಿಳಂಬವಾಗಿದೆ.
ಸದರಿ ಕಾರ್ಯ ಮುಗಿದ ತಕ್ಷಣ ಮುಖ್ಯೋಪಾ ಧ್ಯಯ ಹುದ್ದೆಗಳಿಗೆ ಭಡ್ತಿ ಪ್ರಕ್ರಿಯೆ ಪ್ರಾರಂಭವಾ ಗುತ್ತವೆ.ರಾಜ್ಯದ ತುಂಬಾ ಏಕಕಾಲಕ್ಕೆ ಸದರಿ ಕಾರ್ಯವನ್ನು ಮಾನ್ಯ ಆಯುಕ್ತರು ನಿಗದಿ ಪಡಿಸಿದ ವೇಳಾಪಟ್ಟಿಯಂತೆ ಪ್ರಕ್ರಿಯೆಗಳು ನಡೆಯುತ್ತವೆ.ಇದು ಕೇವಲ ಮಾಹಿತಿಗಾಗಿ ಭಡ್ತಿ ಹೊಂದುವ ಶಿಕ್ಷಕರಿಗೆ KSPSTA ಚಿಕ್ಕೋಡಿಯ ಟೀಮ್ ಪರವಾಗಿ ಲೋಕನ್ನವರ,ಬುಡ್ಡುಗೋಳ ರವರು KSPSTA ಚಿಕ್ಕೋಡಿ ಟೀಮ್ ಪರವಾಗಿ ಶಿಕ್ಷಕರಿಗೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಚಿಕ್ಕೋಡಿ.