ಬೆಂಗಳೂರು –
ಶಿಕ್ಷಕರಿಗೆ ಬಡ್ತಿ ಮಾಹಿತಿ ತಿದ್ದುಪಡಿಗೆ ಸೂಚನೆ ಹೌದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ಪಡೆಯಲು ಅರ್ಹತೆ ಹೊಂದಿರುವ ಪ್ರೌಢಶಾಲಾ ಶಿಕ್ಷಕರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಪೂರ್ಣ ಮಾಹಿತಿಯನ್ನು ಸಲ್ಲಿಸು ವಂತೆ ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.
ಶಿಕ್ಷಕರು ನೀಡಿರುವ ಪಟ್ಟಿಯಲ್ಲಿ ಕೆಲವು ಸಹ ಶಿಕ್ಷಕರ ಜನ್ಮ ದಿನಾಂಕವನ್ನೇ ಸೇವೆಗೆ ದಿನಾಂಕವ ನ್ನಾಗಿ ನಮೂದು ಮಾಡಲಾಗಿದೆ.ಇದರಿಂದ ಸಾಕಷ್ಟು ಗೊಂದಲವಾಗಿದೆ. ಶಿಕ್ಷಕರ ಸೇವಾ ಪುಸ್ತಕವನ್ನು ಪರಿಶೀಲಿಸಿ ನಿಖರ ದಿನಾಂಕವನ್ನು ದಾಖಲಿಸಿ ತಿದ್ದುಪಡಿ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ವಿದ್ಯಾರ್ಹತೆ ಕಾಲಂ ನಲ್ಲಿ ಸ್ನಾತಕೋತ್ತರ ಪದವಿ ಎಂದು ನಮೂದಿಸಿದ್ದು ಯಾವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲಾಗಿದೆ ಎಂದು ನಮೂದಿಸಿಲ್ಲ ಆದ್ದರಿಂದ ಯಾವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲಾಗಿದೆ ಎಂಬು ದನ್ನು ತಿಳಿಸಬೇಕು ಎಂದು ಸೂಚಿಸಿದ್ದಾರೆ
ಹಾಗೆಯೇ ಇತ್ತೀಚೆಗೆ ವರ್ಗಾವಣೆಯಾದ ಶಿಕ್ಷಕರು ವರ್ಗಾವಣೆಗೊಂಡಿರುವ ಜಿಲ್ಲೆಯ ಉಪ ನಿರ್ದೇ ಶಕರು ಮಾಹಿತಿಯನ್ನು ಅಪ್ಡೇಟ್ ಮಾಡ ಬೇಕು. ಕೆಜಿಐಡಿ ಸಂಖ್ಯೆಯನ್ನು ದಾಖಲಿಸಿ ಎಕ್ಸೆಲ್ ಫಾರ್ಮೆಟ್ ಜತೆಗೆ ಪಿಡಿಎನಲ್ಲಿಯೂ ತಿದ್ದುಪಡಿಗಳನ್ನು ದೃಢೀಕರಿಸಿ ಡಿ.23ರೊಳಗೆ ಸಲ್ಲಿಸುವಂತೆ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..