ಬೆಳ್ಳಂ ಬೆಳಿಗ್ಗೆ ಭತ್ತದ ಗದ್ದೆಗೆ ಮುಗಿಚಿ ಬಿದ್ದ ಸರ್ಕಾರಿ ಬಸ್ – ತಪ್ಪಿತು ದೊಡ್ಡ ಅನಾಹುತ ವಿದ್ಯಾರ್ಥಿಗಳು ಸೇರಿದಂತೆ ಹಲವರು ಪಾರು…..

Suddi Sante Desk
ಬೆಳ್ಳಂ ಬೆಳಿಗ್ಗೆ ಭತ್ತದ ಗದ್ದೆಗೆ ಮುಗಿಚಿ ಬಿದ್ದ ಸರ್ಕಾರಿ ಬಸ್ – ತಪ್ಪಿತು ದೊಡ್ಡ ಅನಾಹುತ ವಿದ್ಯಾರ್ಥಿಗಳು ಸೇರಿದಂತೆ ಹಲವರು ಪಾರು…..

ಬಳ್ಳಾರಿ

ಭತ್ತದ ಗದ್ದೆಗೆ ಮುಗಿಚಿ ಬಿದ್ದ ಸರ್ಕಾರಿ ಬಸ್ ತಪ್ಪಿತು ದೊಡ್ಡ ದೊಂದು ಅವಘಡ ಹೌದು ಬಸರಕೋಡು,ಹಡ್ಲಿಗಿ ಗ್ರಾಮಕ್ಕೆ ತೆರುಳುತ್ತಿದ್ದ ಬಸ್ ವೊಂದು ಅಪಘಾತವಾಗಿದೆ.ಚಾಲಕನ ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ಬಸ್ ಪಲ್ಟಿ ಯಾಗಿದೆ.

ಮೋಕಾ ಕಾಲುವೆ ಹತ್ತಿರ ವಿದ್ಯಾರ್ಥಿಗಳಿಂದ ತುಂಬಿದ್ದ ಸರ್ಕಾರಿ ಬಸ್ ಪಲ್ಟಿಯಾಗಿದ್ದು ಬೆಳ್ಳಂ ಬೆಳಿಗ್ಗೆ ಈ ಒಂದು ಅವಘಡ ನಡೆದಿದ್ದು ಅಪಾಯ ದಿಂದ ಬಸ್ ನಲ್ಲಿದ್ದವರು ಪಾರಾಗಿದ್ದಾರೆ ಬಸ್’ ನಲ್ಲಿದ್ದ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ.

ಅದೃಷ್ಟವಶಾತ್ ಬಸ್’ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ಎಲ್ ಎಲ್ ಸಿ ಕಾಲುವೆ ಬಳಿ ಈ ಒಂದು ಘಟನೆ ನಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು‌ ಮಾಡಲಾಗಿದೆ.ಸ್ಥಳಕ್ಕೆ ಮೋಕಾ ಪೊಲೀಸರು ಭೇಟಿ, ಪರಿಶೀಲನೆ ಮಾಡಿದರು.

ಸುದ್ದಿ ಸಂತೆ ನ್ಯೂಸ್ ಬಳ್ಳಾರಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.