ಧಾರವಾಡ –
ಹೌದು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ 6ನೇ ವರ್ಷದ ಮತ್ತೊಂದು ಪಾದಯಾತ್ರೆ ನವೆಂಬರ್ 24 ರಿಂದ ನಡೆಯಲಿದೆ.ಹೌದು ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ 6ನೇ ವರ್ಷದ ಉಳವಿ ಕ್ಷೇತ್ರದ ಪಾದಯಾತ್ರೆಯ ಕಾರ್ಯಕ್ರಮ ನಡೆಯಲಿದೆ.
ಗುರುವಾರ ದಿನಾಂಕ 24-11-2022 ರಿಂದ ಸೋಮವಾರ ದಿನಾಂಕ 28-11-2022 ರವರೆಗೆ ಈ ಒಂದು ಪಾದಯಾತ್ರೆ ನಡೆಯಲಿದ್ದು 24-11-2022 ರ ಗುರುವಾರದಂದು ಮುಂಜಾನೆ 10-00 ಗಂಟೆಗೆ ಗರಗದ ಶ್ರೀ ಗುರು ಮಡಿವಾಳೇಶ್ವರರ ಮಠದಿಂದ ಶ್ರೀ ಉಳವಿಗೆ ಪಾದಯಾತ್ರೆ ಕಾರ್ಯಕ್ರಮ ಆರಂಭವಾಗಲಿದೆ
ಇನ್ನೂ ಈ ಒಂದು ಪಾದಯಾತ್ರೆಗೆ ಚಾಲನೆ ನೀಡಲು ಹಿಂದೂ ಫೈರ್ ಬ್ರಾಂಡ್ ಎಂದೇ ಹೆಸರಾದ ಬಸನಗೌಡ ಯತ್ನಾಳ್ ಅವರು ಆಗಮಿಸುತ್ತಿದ್ದಾರೆ.ಹೀಗಾಗಿ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸುವಂತೆ ಶಾಸಕ ಅಮೃತ ದೇಸಾಯಿ ಮತ್ತು ಟೀಮ್ ಕರೆ ನೀಡಿದ್ದಾರೆ
ಶ್ರೀ ಚನ್ನಬಸವೇಶ್ವರರ ಹಾಗೂ ಶ್ರೀ ಗುರು ಮಡಿವಾಳೇಶ್ವರರ ಕೃಪಾಶೀರ್ವಾದಕ್ಕೆ ಪಾತ್ರ ರಾಗಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..