ಬೆಂಗಳೂರು –
ಕ್ಷೇತ್ರದಲ್ಲಿನ ಬಸ್ ಸಮಸ್ಯೆ ಕುರಿತಂತೆ ಸಾರಿಗೆ ಸಚಿವರನ್ನು ಭೇಟಿಯಾದ ಶಾಸಕ ಎನ್ ಹೆಚ್ ಕೋನರಡ್ಡಿ – ಶಾಲಾ ವಿದ್ಯಾರ್ಥಿಗಳ, ಸಾರ್ವಜ. ನಿಕರ ಸಮಸ್ಯೆ ಕುರಿತಂತೆ ಸಾರಿಗೆ ಸಚಿವರನ್ನು ಭೇಟಿಯಾಗಿ ಕ್ಷೇತ್ರಕ್ಕೆ ಹೊಸ ಬಸ್ ಗಳ ಬೇಡಿಕೆ ಇಟ್ಟ ಜನನಾಯಕ
ಹೌದು ಕ್ಷೇತ್ರದಲ್ಲಿನ ಯಾವುದೇ ಸಮಸ್ಯೆ ವಿಚಾರ ಯಾರಾದರೂ ಹೇಳಿದರೆ ದೂರು ನೀಡಿದರೆ ಯಾವುದಾದರೂ ವಿಷಯವನ್ನು ಗಮನಕ್ಕೆ ತಗೆದುಕೊಂಡು ಬಂದರೆ ಕೂಡಲೇ ಸ್ಪಂದಿಸಿ ಇತ್ಯರ್ಥ ಮಾಡಿ.ಈ ಮೂಲಕ ಕ್ಷೇತ್ರದಲ್ಲಿನ ಸಾರ್ವಜನಿಕರಿಗೆ ನೆರವಾಗುತ್ತಿದ್ದಾರೆ
ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಹೆಚ್ ಕೊನರೆಡ್ಡಿ.ಹೌದು ಅಧಿಕಾರ ಇರಲಿ ಇಲ್ಲದಿ ರಲಿ ಸದಾ ಕಾಲವೂ ಕ್ಷೇತ್ರಕ್ಕಾಗಿ ಕ್ಷೇತ್ರದಲ್ಲಿದ್ದು ಕೊಂಡು ಸೇವೆಯನ್ನು ಮಾಡುತ್ತಿರುವ ಇವರು ಈಗ ರಾಜ್ಯದಲ್ಲಿ ತಮ್ಮದೇಯಾದ ಪಕ್ಷದ ಸರ್ಕಾರ ಬಂದ ಮೇಲೆ ಕ್ಷೇತ್ರದಲ್ಲಿನ ಪ್ರತಿಯೊಂದು ಕೆಲಸ ಕಾರ್ಯಗಳ ಕುರಿತಂತೆ ಶೀಘ್ರವಾಗಿಸಂಬಂಧಿಸಿದ ಸಚಿವರನ್ನು ಇಲಾಖೆಯ ಅಧಿಕಾರಿಗಳನ್ನು ಭೇಟಿ ಯಾಗಿ ಧ್ವನಿ ಎತ್ತುತ್ತಿದ್ದು ಈಗ ಮತ್ತೊಂದು ಪ್ರಮುಖ ಸಮಸ್ಯೆ ಕುರಿತಂತೆ ಸಾರಿಗೆ ಸಚಿವರನ್ನು ಭೇಟಿಯಾಗಿದ್ದಾರೆ.
ಹೌದು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಬಸ್ಗಳ ಕೊರತೆಯ ಸಮಸ್ಯೆಯನ್ನು ಅರಿತು ಕೊಂಡ ಶಾಸಕರು ಬೆಂಗಳೂರಿನಲ್ಲಿ ತುರ್ತಾಗಿ ಸಾರಿಗೆ ಸಚಿವರನ್ನು ಭೇಟಿಯಾಗಿ ಸಮಸ್ಯೆಯನ್ನು ಗಮನಕ್ಕೆ ತಗೆದುಕೊಂಡು ಬಂದರು.ಬಸ್ ಗಳ ಕೊರತೆಯಿಂದಾಗಿ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಓಡಾಡಲು ಸಾಕಷ್ಟು ಸಮಸ್ಯೆಯಾಗುತ್ತಿದ್ದು
ಈ ವಿಚಾರವಾಗಿ ಬೆಂಗಳೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರನ್ನು ಹಾಗೂ ವ್ಯವಸ್ಥಾ ಪಕ ನಿರ್ದೇಶಕರನ್ನು ಭೇಟಿಯಾಗಿ ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ನೂತನ ಬಸ್ಗಳನ್ನು ಪೂರೈಸಬೇಕೆಂದು ಮನವಿ ಸಲ್ಲಿಸಿದರು. ಶಾಸಕ ರೊಂದಿಗೆ ಕ್ಷೇತ್ರದ ಮುಖಂಡರು ಪಕ್ಷದ ಕಾರ್ಯ ಕರ್ತರು ಆಪ್ತರು ಸೇರಿದಂತೆ ಹಲವರು ಉಪಸ್ಥಿ ತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..