ಇಂಡಿ –
ಎನ್ ಪಿಎಸ್ ವಿಚಾರ ಕುರಿತಂತೆ ಡಿಸೆಂಬರ್ 19 ರಂದು ಬೆಂಗಳೂರಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ನಡೆಯಲಿದೆ.ಈಗಾಗಲೇ ಈ ಒಂದು ವಿಚಾರದಲ್ಲಿ ಸಿಡಿದೆದ್ದಿರುವ ರಾಜ್ಯದ ಎನ್ ಪಿಎಸ್ ನೌಕರರು ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನವನ್ನು ಮಾಡಲಿದ್ದಾರೆ.
ಇದಕ್ಕಾಗಿ ಈಗಾಗಲೇ ಹೋರಾಟದಲ್ಲಿ ಪಾಲ್ಗೊಳ್ಳಲು ಎಲ್ಲಾ ಸಿದ್ದತೆಗಳನ್ನು ರಾಜ್ಯದ ಎನ್ ಪಿಎಸ್ ನೌಕರರು ಸಿದ್ದರಾಗಿದ್ದು ಇದರೊಂದಿಗೆ ಈ ಒಂದು ಹೋರಾಟಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರವರು ಹೋರಾಟಗಾರರಿಗೆ ನೆರವನ್ನು ನೀಡಿದ್ದಾರೆ.
ಹೌದು ಇಂಡಿ ತಾಲೂಕಿನ ಶಾಸಕರಾದ ಯಶವಂತರಾಯಗೌಡ ವಿ ಪಾಟೀಲ್ ಅವರು NPS ಸಂಘದ ಮನವಿಗೆ ಸ್ಪಂದಿಸಿ ಬೆಳಗಾವಿ ಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ NPS ಕುರಿತು ಧ್ವನಿ ಎತ್ತಿ OPS ಜಾರಿಗೊಳಿಸಲು ಅಗ್ರಹಿಸುವುದಾಗಿ ನೌಕರರಿಗೆ ತಿಳಿಸಿದ್ದಾರೆ.
ಅಲ್ಲದೇ ಹೋರಾಟದ ಬೆಂಬಲಾರ್ಥವಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿರುತ್ತಾರೆ. ನೆರವಿಗೆ ಬಂದಿರುವ ಶಾಸಕರಿಗೆ ಎಲ್ಲಾ NPS ನೌಕರರು ಹಾಗೂ ಕುಟುಂಬ ಸದಸ್ಯರ ಪರವಾಗಿ ಅನಂತಾನಂತ ಕೃತಜ್ಞತೆಗಳನ್ನು ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು NPS ಸಂಘ ಇಂಡಿ ಅವರು ಸಲ್ಲಿಸಿದ್ದಾರೆ.ಒಟ್ಟಾರೆ ಏನೇ ಆಗಲಿ ಡಿಸೆಂಬರ್ 19 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಶಕ್ತಿ ಪ್ರದರ್ಶನಕ್ಕೆ ಬನ್ನಿ ಬನ್ನಿ ಕೈ ಜೋಡಿಸಿ ಒಗ್ಗಟ್ಟನ್ನು ಪ್ರದರ್ಶನ ಮಾಡಿ.
ಸುದ್ದಿ ಸಂತೆ ನ್ಯೂಸ್ ಇಂಡಿ…..