LIVE TV LocalCrimeNationalInternationalPoliticsEducationTechnologyEntertainmentSportsFeature
State News

ಬೆಳ್ಳಂ ಬೆಳಿಗ್ಗೆ ಇಬ್ಬರು ಸರ್ಕಾರಿ ಅಧಿಕಾರಿಗಳು ಅಮಾನತು..... ರಾಜಕೀಯ ಗುದ್ದಾಟಕ್ಕೆ ಬಲಿಯಾದ ಇಬ್ಬರು ಅಧಿಕಾರಿಗಳು.....

ಬೀದರ್ -

ಬಸವಕಲ್ಯಾಣದಲ್ಲಿ ಬಿಜೆಪಿ ಶಾಸಕ ಶರಣು ಸಲಗರ್ ಹಾಗೂ ಕಾಂಗ್ರೆಸ್ ಮಾಜಿ ಎಂಎಲ್ಸಿ ವಿಜಯ್ ಸಿಂಗ್ ನಡುವಿನ ಬ್ಯಾನರ್ ಗಲಾಟೆ ಇದೀಗ ಇಬ್ಬರು ಸರ್ಕಾರಿ ಅಧಿಕಾರಿಗಳ ಅಮಾನತಿಗೆ ಕಾರಣವಾಗಿದೆ ಹೌದು ರಾಜಕೀಯ ಗುದ್ದಾಟದ ನಡುವೆ ಆರೋಗ್ಯ ಇಲಾಖೆ ಅಧಿಕಾರಿಗಳ ಅಮಾನತಿಗೆ ಕಾರಣವಾಗಿದೆ

ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಯಲ್ಲಿ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಬೀದರ್ ಡಿಹೆಚ್‌ಒ ಡಾ.ಧ್ಯಾನೇಶ್ವರ ನಿರಗುಡೆ ಹಾಗೂ ಬಸವಕಲ್ಯಾಣ ಟಿಎಚ್‌ಒ ಡಾ. ಅಶೋಕ್ ಮೈಲಾರೆ ಅವರನ್ನು ಆರೋಗ್ಯ ಇಲಾಖೆ ಅಮಾನತು ಗೊಳಿಸಿದೆ.ಆರೋಗ್ಯ ಇಲಾಖೆಯ ಆಯುಕ್ತ ಗುರುದತ್ತ ಹೆಗಡೆ ಅಮಾನತು ಆದೇಶ ಹೊರಡಿಸಿದ್ದು, ಇಬ್ಬರನ್ನೂ ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ.

ಡಾ. ಧ್ಯಾನೇಶ್ವರ ನಿರಗುಡೆ ಅವರನ್ನು ಮಾನ್ವಿ ತಾಲೂಕು ಆಸ್ಪತ್ರೆಗೆ ಹಾಗೂ ಡಾ. ಅಶೋಕ್ ಮೈಲಾರೆ ಅವರನ್ನು ಅಫಜಲಪುರ ತಾಲೂಕು ಆಸ್ಪತ್ರೆಗೆ ವರ್ಗಾಯಿಸಲಾಗಿದೆ.ಸೆಪ್ಟೆಂಬರ್ 16ರಂದು ಬಸವ ಕಲ್ಯಾಣದಲ್ಲಿ ತಾಲೂಕು ವಿಭಾಗೀಯ ಮಟ್ಟದ ಜಿಲ್ಲಾಸ್ಪತ್ರೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯ ಕ್ರಮದ ವೇದಿಕೆ ಬ್ಯಾನರ್ನಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಫೋಟೋ ಹಾಕದಿರು ವುದು ವಿವಾದಕ್ಕೆ ಕಾರಣವಾಗಿತ್ತು.news_1789710642_0_706.webp

 

 

ಶಿಷ್ಟಾಚಾರದಂತೆ ಸಚಿವರ ಫೋಟೋ ಇರಬೇಕಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಎಂಎಲ್ಸಿ ವಿಜಯ್ ಸಿಂಗ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.

ಬಳಿಕ ಅಧಿಕಾರಿಗಳು ಬ್ಯಾನರ್ ಬದಲಿಸಲು ಮುಂದಾದಾಗ ಶಾಸಕ ಶರಣು ಸಲಗರ್ ಮತ್ತು ವಿಜಯ್ಸಿಂಗ್ ನಡುವೆ ಮಾತಿನ ಚಕಮಕಿ ನಡೆದಿದೆ. ಬ್ಯಾನರ್ ವಿಚಾರಕ್ಕೆ ವಿಜಯ್ಸಿಂಗ್ ಗಲಾಟೆ ಮಾಡುತ್ತಿ ದ್ದಾರೆ ಎಂದು ಆರೋಪಿಸಿ ಸಲಗರ್ ಆಕ್ಷೇಪ ವ್ಯಕ್ತಪಡಿಸಿದ್ದರು ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸಲಗರ್ ದೂರವಾಣಿ ಕರೆ ಮಾಡಿ ವಿಜಯ್ ಸಿಂಗ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು

ಘಟನೆ ಬಳಿಕ ವಿಜಯ್ಸಿಂಗ್ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಮತ್ತೊಂದೆಡೆ, ಬ್ಯಾನರ್ ವಿಚಾರದಲ್ಲಿ ತಮ್ಮ ವಿರುದ್ಧ ನಡೆದ ಬೆಳವಣಿಗೆಗಳ ಬಗ್ಗೆ ಶಾಸಕ ಶರಣು ಸಲಗರ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಗಲಾಟೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಇಬ್ಬರು ನಾಯಕರನ್ನೂ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಐಬಿಗೆ ಕರೆಸಿಕೊಂಡು ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಬಳಿಕ ಇಬ್ಬರನ್ನೂ ತಮ್ಮ ವಾಹನದಲ್ಲೇ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು.

ಇದೀಗ ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಲ್ಲಿ ಲೋಪವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಇಬ್ಬರು ಅಧಿಕಾರಿ ಗಳ ವಿರುದ್ಧ ಅಮಾನತು ಕ್ರಮ ಕೈಗೊಂಡಿದೆ. ಶಾಸಕರು ಹಾಗೂ ಮಾಜಿ ಎಂಎಲ್ಸಿ ನಡುವಿನ ಬ್ಯಾನರ್ ಗಲಾಟೆಗೆ ಅಧಿಕಾರಿಗಳಿಬ್ಬರು ಅಮಾನತಿಗೆ ಒಳಗಾಗಿರುವುದು ಬೀದರ್ ರಾಜಕೀಯ ವಲಯ ದಲ್ಲಿ ಚರ್ಚೆಗೆ ಕಾರಣವಾಗಿದೆ.

ಸುದ್ದಿ ಸಂತೆ ನ್ಯೂಸ್ ಬೀದರ್.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಾಥಮಿಕ ಶಿಕ್ಷಕರಿಗೆ ಹೊಸ ಕೋರ್ಸ್ ಆರಂಭ.....ಎಲ್ಲವೂ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೊಂದು ಆರಂಭ.....ಧಾರವಾಡದಲ್ಲಿ ವೀರಶೈವ ಲಿಂಗಾಯತ ಮಹಾಸಭಾಗೆ ನಿವೇಶನ ಮಂಜೂರು  - ಶಾಸಕ ವಿನಯ ಕುಲಕರ್ಣಿ ಮನವಿಗೆ ಸ್ಪಂದಿಸಿದ CM.....ಮಹಾಸಭಾದಿಂದ ಗೌರವ ಸನ್ಮಾನ.....ಬೆಳ್ಳಂ ಬೆಳಿಗ್ಗೆ ಇಬ್ಬರು ಸರ್ಕಾರಿ ಅಧಿಕಾರಿಗಳು ಅಮಾನತು..... ರಾಜಕೀಯ ಗುದ್ದಾಟಕ್ಕೆ ಬಲಿಯಾದ ಇಬ್ಬರು ಅಧಿಕಾರಿಗಳು.....NPS ಕುರಿತು ಅಂದು ಎಚ್ಚರಿಸಿದ ಧ್ವನಿ…ಇಂದು ಕಹಿ ಅನುಭವದ ಪ್ರತಿಧ್ವನಿ.....ನೌಕರರೊಬ್ಬರ ಪತ್ರ ವೈರಲ್.....2 KM ಶಾಲೆಗೆ ಹೋಗಲು 2 ಗಂಟೆ ಸಮಯ.....ಸಿಡಿದೆದ್ದ ಪೋಷಕರು ಶಾಲಾ ಇದು ಬದಲಾವಣೆಗೆ ಸಾಕ್ಷಿ.....Big Mishra 261ನೇ ಶಾಖೆ ಬೆಳಗಾವಿ ಯಲ್ಲಿ ಆರಂಭ.....ಸಂಜಯ ಮಿಶ್ರಾ ಅವರ Big Mishra ಮತ್ತಷ್ಟು ವಿಸ್ತಾರಸೇವಾನಿರತ ಶಿಕ್ಷಕರಿಗೆ 6 ತಿಂಗಳ ವಿಶೇಷ ತರಬೇತಿ.....ನಡೆಯಲಿದೆ ಸರ್ಟಿಫಿಕೇಟ್‌ ಕೋರ್ಸ್‌.....SSLC ಅರ್ಧವಾರ್ಷಿಕ ಪರೀಕ್ಷೆ'ಯ ವೇಳಾಪಟ್ಟಿ ಪ್ರಕಟ.....ಹೀಗಿದೆ ವೇಳಾಪಟ್ಟಿ.....ಧಾರವಾಡ ದ JSS ನಲ್ಲಿ ಸೆ 18 ರಂದು ರಕ್ತದಾನ‌ ಶಿಬಿರ.....ಬೃಹತ್ ರಕ್ತದಾನ‌ ಶಿಬಿರ.....ಬೆಳಗಾವಿಯಲ್ಲಿ ಸವಿರುಚಿಗೆ ಉದ್ಘಾಟನೆಗೆ ಸಜ್ಜಾದ Big Mishra.....ಸೆ.24ರಂದು "Big Mishra" Pedha & Family Restaurant’ ಶುಭಾರಂಭ.....