ಕಲಬುರಗಿ -
ಹೌದುಕ ಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ರಾತಿನಿಧ್ಯ ಸಿಕ್ಕಿ 13 ವರ್ಷಗಳು ಕಳೆದಿವೆ. ಆದರೆ, ಈ ಭಾಗದ ನೌಕರ ರಿಗೆ 371 ಜೆ ವಿಶೇಷ ಸ್ಥಾನಮಾನ ವರವಾಗದೆ ಶಾಪ ವಾಗಿ ಪರಿಣಮಿಸಿದೆ.ಕಲ್ಯಾಣದ ನೌಕರರು ಜೂನಿಯ ರ್ಗಳಾದರೆ ಕಲ್ಯಾಣ ಕರ್ನಾಟಕೇತರರು ಸೀನಿಯರ್ ಗ್ರೇಡ್ ಹುದ್ದೆಗಳನ್ನು ಪಡೆಯುತ್ತಿದ್ದಾರೆ.ಈ ಸಮಸ್ಯೆ ಬಗೆಹರಿಸಲು ಸರಕಾರ ಮುಂದಾಗದಿರುವುದಕ್ಕೆ ನೌಕರರ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದ ಕಾರಣಕ್ಕಾಗಿ 371ಜೆ ವಿಶೇಷ ಸ್ಥಾನಮಾನವನ್ನು ಜಾರಿ ಮಾಡಲಾಗಿದೆ
ಶಿಕ್ಷಣ ಮತ್ತು ನೇಮಕಾತಿಯಲ್ಲಿ ಪ್ರಸ್ತುತ ಸರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಆದರೆ, ಸರಕಾರಿ ನೌಕರರಿಗೆ 371ಜೆ ಯಾಕಾದರು ತರಲಾಗಿದೆ ಎನ್ನುವಂತಾಗಿದೆ. ಏಕೆಂದರೆ ಕಲ್ಯಾಣ ಕರ್ನಾಟಕ ಭಾಗದವರಿಗೆ ಸೀನಿ ಯಾರಿಟಿ ಇದ್ದರೂ ಬಡ್ತಿ ಸಿಗುತ್ತಿಲ್ಲ. ಆದರೆ, ಕಲ್ಯಾಣ ಕರ್ನಾಟಕೇತರ ಬೇರೆ ಜಿಲ್ಲೆಗಳ ನೌಕರರು ಈ ಭಾಗದ ನೌಕರರಿಗಿಂತ ಜೂನಿಯರ್ಗಳಿದ್ದರೂ ಕಲ್ಯಾಣದವ ರಿಗಿಂತ ಬೇಗ ಬಡ್ತಿ ಪಡೆದು ನಮ್ಮ ಭಾಗದ ನೌಕರರಿ ಗಿಂತ ಸೀನಿಯರ್ ಗ್ರೇಡ್ ಹುದ್ದೆಗಳನ್ನು ಪಡೆಯು ವಂತಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ನೌಕರರು ಸರಕಾರದ ವಿರುದ್ಧ ಅಸಮಾ ಧಾನ ವ್ಯಕ್ತಪಡಿಸುತ್ತಿದ್ದಾರೆ.
ಸರಕಾರಿ ನೌಕರರಿಗೆ ಬಡ್ತಿಯನ್ನು ಜಾರಿ ಮಾಡುವಾಗ ಮೊದಲು ನೌಕರರ ಅಭಿಪ್ರಾಯಗಳನ್ನು ಸಂಗ್ರಹಿಸ ಲಾಗುತ್ತಿದೆ. ಯಾರಿಗೆ 371ಜೆ ಸೌಲಭ್ಯ ಬೇಕು ಎಂದು ಪ್ರಶ್ನೆ ಕೇಳಿದಾಗ ಅನಿವಾರ್ಯವಾಗಿ ಈ ಭಾಗದ ನೌಕರರು ಕಲ್ಯಾಣ ಕರ್ನಾಟಕ ಎಂದು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಇಲಾಖೆಗಳು ಕಲ್ಯಾಣ ಕರ್ನಾಟಕ ಒಂದು ಸೀನಿಯಾರಿಟಿ ಲಿಸ್ಟ್ ಮತ್ತು ನಾನ್ ಕಲ್ಯಾಣ ಕರ್ನಾಟಕ ಇನ್ನೊಂದು ಲಿಸ್ಟ್ ಸೇರಿ ಒಟ್ಟು ಎರಡು ಲಿಸ್ಟ್ಗಳನ್ನು ಮಾಡಲಾಗುತ್ತಿದೆ.
ಉದಾಹರಣೆಗೆ ಕಲ್ಯಾಣ ಕರ್ನಾಟಕದ 'ಸಿ' ಗ್ರೇಡ್ ನೌಕರ 'ಬಿ' ಗ್ರೇಡ್ ಹುದ್ದೆಗೆ ಬಡ್ತಿ ಪಡೆಯಬೇಕಾದರೆ ಕಲ್ಯಾಣ ಕರ್ನಾಟಕದಲ್ಲಿ ಬಡ್ತಿಗೆ ಖಾಲಿ ಇರುವ ಶೇ.75 ರಷ್ಟು ಹುದ್ದೆಗಳಲ್ಲಿ ಮಾತ್ರ ಅರ್ಹನಾಗಿರುತ್ತಾನೆ. ಕಲ್ಯಾಣ ಕರ್ನಾಟಕದವರು ಹೆಚ್ಚು ಜನರು ಇರುವಾಗ ಶೇ.75ರಷ್ಟು ಜನರಿಗೆ ಮಾತ್ರ ಬಡ್ತಿ ಸಿಗುತ್ತದೆ. ಆದರೆ, ಈ ಭಾಗದಲ್ಲಿ ಕಲ್ಯಾಣ ಕರ್ನಾಟಕೇತರ ನೌಕರರು ಶೇ.5ರಿಂದ 6ರಷ್ಟು ಇದ್ದಾರೆ. ಇವರಿಗೆ ಶೇ.20ರಿಂದ ಶೇ.25ರಷ್ಟು ಬಡ್ತಿಯಲ್ಲಿ ಹುದ್ದೆಗಳು ಖಾಲಿಯಿವೆ.
ಇವರು ಕಡಿಮೆ ನೌಕರರು ಇದ್ದು, ಹೆಚ್ಚು ಹುದ್ದೆಗಳು ಸಿಗುವುದರಿಂದ ಅನಿವಾರ್ಯವಾಗಿ 'ಬಿ' ದರ್ಜೆಯ ಹುದ್ದೆ ಬಡ್ತಿ ಸಿಗುತ್ತದೆ. ಇದರಿಂದ ಕಲ್ಯಾಣದ ನೌಕರರು ಜೂನಿಯರ್ಗಳಾಗಿ ಉಳಿದರೆ ಬೇರೆ ಜಿಲ್ಲೆಯ ನೌಕರರು ಸೀನಿಯರ್ಗಳಾಗುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕಲಬುರಗಿ......