LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಾಲಾ ಸಮಯ ಬದಲಾವಣೆ ಮಾಡಿದ್ರೆ ಸಮಸ್ತ ಪರಿಹಾರವಾಗುತ್ತಾ.....ಶಾಲಾ ಸಮಯ ಬದಲಾವಣೆ ಮೇಲೆ ಹುಟ್ಟುಕೊಂಡಿವೆ ಹತ್ತಾರು ಪ್ರಶ್ನೆ ಗಳು.....

ಬೆಂಗಳೂರು -

ಸಧ್ಯ ರಾಜ್ಯದಲ್ಲಿ ಶಾಲೆಗಳ ಸಮಯದಲ್ಲಿ ಬದಲಾವಣೆ ಆಗುತ್ತಾ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ಏನಾಗಲಿದೆ ಏನು ಎಂಬ ಬಗ್ಗೆ ಬಿಸಿ ಬಿಸಿ ಮಾತುಗಳು ಚರ್ಚೆಯ ನಡುವೆ ಮತ್ತೊಂದು ದೊಡ್ಡ ಪ್ರಶ್ನೆ ಹುಟ್ಟುಕೊಂಡಿದೆ ಹೌದು ಶಾಲೆಗಳ ಸಮಯ ವನ್ನು ಬದಲಾವಣೆ ಮಾಡಿದರೆ ಸಮಸ್ಯೆ ಬಗೆಹರಿಯುತ್ತಾ ಎಂಬ ಮಾತುಗಳು ಚರ್ಚೆ ಗೆ ವೇದಿಕೆಯಾಗಿವೆ

ಶಾಲಾ ಸಮಯ ಬದಲಾವಣೆ ಮಾತ್ರದಿಂದ  ಬೆಂಗಳೂರು ಸೇರಿದಂತೆ ಕೆಲ ಪ್ರಮುಖ ನಗರ ಗಳ ಟ್ರಾಫಿಕ್ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾ ಗುತ್ತದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ. ನಗರ ದಲ್ಲಿ ಹೆಚ್ಚುತ್ತಿರುವ ಖಾಸಗಿ ವಾಹನಗಳ ಸಂಖ್ಯೆ, ಶಾಲಾ ಬಸ್‌ಗಳು, ಕ್ಯಾಬ್‌ಗಳು, ಕಚೇರಿ ವಾಹನಗಳು ಹಾಗೂ ಪೀಕ್ ಅವರ್‌ಗಳಲ್ಲಿನ ಸಂಚಾರದ ಒತ್ತಡವನ್ನು ಸಮಗ್ರವಾಗಿ ನಿರ್ವಹಿಸುವ ಅಗತ್ಯವಿದೆ.

ಶಾಲೆಗಳ ಸಮಯವನ್ನು ಬದಲಿಸಿದರೆ ಪೋಷಕರ ಕಚೇರಿ ಸಮಯಕ್ಕೆ ಹೊಂದಾಣಿಕೆಯಾಗದಿರುವ ಸಾಧ್ಯತೆಯೂ ಇದೆ ವಿಶೇಷವಾಗಿ ಇಬ್ಬರೂ ಉದ್ಯೋಗದಲ್ಲಿರುವ ಕುಟುಂಬಗಳಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮತ್ತು ಮರಳಿ ಕರೆತರುವ ವ್ಯವಸ್ಥೆ ಮತ್ತಷ್ಟು ಸವಾಲಾಗಬಹುದು.

ಹೀಗಾಗಿ ಕೇವಲ ಆಡಳಿತಾತ್ಮಕವಾಗಿ ಸಮಯ ಬದಲಿಸುವ ಬದಲು ಪೋಷಕರು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಶಾಲಾ ವಾಹನಗಳ ಸಂಘಟನೆಗಳ ಅಭಿಪ್ರಾಯ ಪಡೆಯುವುದು ಅಗತ್ಯವಾಗಿದೆ.ಈ ಕುರಿತು ಸಂಚಾರ ಪೊಲೀಸರು, ಶಿಕ್ಷಣ ಇಲಾಖೆ, ಪೋಷಕರ ಪ್ರತಿನಿಧಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹಾಗೂ ಶಾಲಾ ವಾಹನ ಚಾಲಕರ ಸಂಘಟನೆಗಳೊಂದಿಗೆ ಸಭೆ ನಡೆಸಲು ಸರ್ಕಾರ ಮುಂದಾಗಿದೆ ಎಲ್ಲಾ ವರ್ಗಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ

ಸದ್ಯಕ್ಕೆ ಶಾಲಾ ಸಮಯ ಬದಲಾವಣೆಯ ಬಗ್ಗೆ ಯಾವುದೇ ಅಂತಿಮ ಆದೇಶ ಹೊರಬಿದ್ದಿಲ್ಲ. ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಸಮಾಲೋಚನೆಯ ನಂತರವೇ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ.ಒಟ್ಟಿನಲ್ಲಿ, ಬೆಂಗಳೂರಿನ ದಟ್ಟಣೆಗೆ ಶಾಲಾ ಸಮಯ ಬದಲಾವಣೆ ಒಂದು ಪರಿಹಾರ ವಾಗಬಹುದೇ ಹೊರತು ಏಕೈಕ ಪರಿಹಾರವಲ್ಲ. ಶಾಲಾ ಸಮಯದೊಂದಿಗೆ ಕಚೇರಿ ಸಮಯದ ಹಂತವಾರು ಬದಲಾವಣೆ, ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ, ಶಾಲಾ ಬಸ್‌ಗಳ ಸಂಚಾರ ನಿರ್ವಹಣೆ ಹಾಗೂ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ನಿಯಂತ್ರಣ ಸೇರಿದಂತೆ ಹಲವು ಕ್ರಮಗಳನ್ನು ಸಮನ್ವಯಗೊಳಿಸಿದಾಗ ಮಾತ್ರ ನಗರದ ಸಂಚಾರ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಸಿಗುತ್ತಾ ಗಿಫ್ಟ್​..... DA ಇಷ್ಟು ಪರ್ಸೆಂಟ್​ ಹೆಚ್ಚಳಕ್ಕೆ ಸಿದ್ದತೆ.....ಶಾಲಾ ಸಮಯ ಬದಲಾವಣೆ ಮಾಡಿದ್ರೆ ಸಮಸ್ತ ಪರಿಹಾರವಾಗುತ್ತಾ.....ಶಾಲಾ ಸಮಯ ಬದಲಾವಣೆ ಮೇಲೆ ಹುಟ್ಟುಕೊಂಡಿವೆ ಹತ್ತಾರು ಪ್ರಶ್ನೆ ಗಳು.....ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ...... ಪೊಲೀಸ್ ಇಲಾಖೆಯ ಆಡಳಿತ ಯಂತ್ರಕ್ಕೆ ಸರ್ಜರಿ.....6ನೇ ತರಗತಿ ಮಕ್ಕಳಿಗೆ ಬಿಗ್ ರಿಲೀಫ್.....ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿ.....ಬೆಂಗಳೂರಿನಲ್ಲಿ ‘ಗುರು ವಂದನೆ–ಹೃದಯಾಭಿವಂದನೆ’ ಕಾರ್ಯಕ್ರಮ.....KSPSTA ಸಂಘಟನೆ ಯಿಂದ ಮಹಾನ್ ಕಾರ್ಯಕ್ರಮ.....ಶಾಲೆಗಳಲ್ಲಿ ಮಕ್ಕಳಿಗೆ ಶುರುವಾಗಲಿದೆ ಹೊಸ ಪಾಠ.....ಶಿಕ್ಷಕರಿಗೆ ಹೊಸದೊಂದು ಜವಾಬ್ದಾರಿ.....AI ಬಳಸಿ 1980ರ ಟ್ರೆಂಡಿಂಗ್‌ ಫೋಟೋ ಕ್ರಿಯೇಟ್ ಮಾಡುವ ಮುನ್ನ ಎಚ್ಚರ.....ಸರ್ಕಾರಿ ನೌಕರರೇ ಟಾರ್ಗೆಟ್.....ನೌಕರರ ಬಡ್ತಿಗೆ ಗ್ರಹಣ.....ನೌಕರರ ವಲಯದಿಂದ ಆಕ್ರೋಶ ಅಸಮಾಧಾನ.....ಶಿಕ್ಷಣ ಸಚಿವರನ್ನು ಭೇಟಿಯಾದ KSPSTA ಟೀಮ್..... ಸಚಿವರೊಂದಿಗೆ ಮಹತ್ವದ ಚರ್ಚೆ ಮಾಡಿದ ಚಂದ್ರಶೇಖರ ನುಗ್ಗಲಿ ನೇತೃತ್ವದ ನಿಯೋಗ.....ಗೌರಿ ಗಣೇಶ ಹಬ್ಬಕ್ಕೆ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿರುವ Big Mishra.....ಹಬ್ಬದ ಸಂಭ್ರಮಕ್ಕೆ ಮಳಿಗೆಗಳಿಗೆ ಹೊಸ ಮೆರುಗು ನೀಡಿದ ಸಂಜಯ ಮಿಶ್ರಾ.....