ಹಾವೇರಿ –
ಬಿಸಿಯೂಟ ದಲ್ಲಿ ಸತ್ತ ಹಲ್ಲಿಯೊಂದು ಕಂಡು ಬಂದು 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಹಾವೇರಿ ಯಲ್ಲಿ ನಡೆದಿದೆ.ಹೌದು ಎಂದಿನಂತೆ ಇಂದು ಮಧ್ಯಾಹ್ನ ಊಟ ಮಾಡುವಾಗ ಸತ್ತ ಹಲ್ಲಿ ಕಾಣಿಸಿಕೊಂ ಡಿದೆ.ಮಧ್ಯಾಹ್ನದ ಬಿಸಿಯೂಟ ತಿಂದು 81 ಮಕ್ಕಳು ಅಸ್ವಸ್ಥರಾಗಿದ್ದು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದಲ್ಲಿ ನಡೆದಿದೆ.
ಮಧ್ಯಾಹ್ನ ಎಂದಿನಂತೆ ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟ ಬಡಿಸಲಾಗಿದೆ.ಒಬ್ಬ ಬಾಲಕನಿಗೆ ಊಟ ಬಡಿಸುವಾಗ ತಟ್ಟೆಗೆ ಸತ್ತ ಹಲ್ಲಿ ಬಿದ್ದಿದೆ. ಅಷ್ಟರಲ್ಲಿ ಮಕ್ಕಳೆಲ್ಲಾ ಊಟ ತಿಂದಿದ್ದಾರೆ. ಒಬ್ಬ ಬಾಲಕ ನಿಗೆ ವಾಂತಿಯಾಗಿದೆ.ಹಲ್ಲಿ ನೋಡಿದ ಭಯಕ್ಕೇನೆ ಮಕ್ಕಳಿ ಗೆ ವಾಂತಿಯಾಗಿದ್ದು ಅಸ್ವಸ್ಥಗೊಂಡಿದ್ದಾರೆ ತಕ್ಷಣ ಮಕ್ಕಳನ್ನ ಆಸ್ಪತ್ರೆಗೆ ಸೇರಿಸಲಾಗಿದೆ.ಸದ್ಯ ಮಕ್ಕಳೆಲ್ಲರೂ ಪ್ರಾಣಾಪಾ ಯದಿಂದ ಪಾರಾಗಿದ್ದಾರೆ.ಇನ್ನೂ ಈ ಒಂದು ಸುದ್ದಿ ತಿಳಿದ ಡಿಡಿಪಿಐ ಅಂದಾನಪ್ಪ ವಡಗೇರಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.ಅದರಲ್ಲಿ ಐದು ಮಕ್ಕಳು ತಲೆನೋವು, ವಾಂತಿಯಿಂದ ಅಸ್ವಸ್ಥರಾಗಿದ್ದಾರೆ ಇನ್ನುಳಿದ ಮಕ್ಕಳು ಆರೋಗ್ಯವಾಗಿದ್ದಾರೆ.