ಗೋಕಾಕ –
ಮಕ್ಕಳಗೇರಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಶ್ರೀ ಪ್ರಕಾಶ ತಿಪ್ಪಣ್ಣ ಮುರ್ಕಿಬಾವಿ ರವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಇವರು ರಾಜ್ಯ ಮಟ್ಟದ ಉತ್ತಮ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವ ಶಿಕ್ಷಣ ಸಾರಥಿ ಪ್ರಶಸ್ತಿ ಯನ್ನು ತುಮಕೂರಿನ ಉದ್ಧಾನೇಶ್ವರ ಕಲ್ಯಾಣ ಮಂಟಪ ಸಿದ್ದಗಂಗಾ ಮಠದಲ್ಲಿ ಜರುಗಿದ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಕುಣಿಗಲ್ ಹಿತ್ತಲಹಳ್ಳಿ ಮಠಾಧ್ಯಕ್ಷರಾದ ಶ್ರೀ ಡಾ ಸದಾಶಿವ ಶಿವಾಚಾರ್ಯ ಸ್ವಾಮಿಗಳು,ಶಾಸಕ ಡಿ.ಸಿ ಗೌರಿಶಂಕರ,ಶಂಭುಲಿಂಗನಗೌಡ,ರಾಜ್ಯಾಧ್ಯಕ್ಷರಾದ ಪಿ. ಮಹೇಶ,ಚಂದ್ರಶೇಖರ ನಾಯಕ,ನಾಗಭೂಷನ ಕೆ.ಟಿ, ಉಮಾದೇವಿ ಗುಡ್ಡದ,ಪ್ರವೀಣಕುಮಾರ ಓತಿಹಾಳ, ಯಶೋದ ಎಮ್.ಎಸ್,ಲಕ್ಷ್ಮೀ ಕಂಬಾರ ಹಾಗೂ ಪರಿಷತ್ ಪದಾಧಿಕಾರಿಗಳು ಗೋಕಾಕ ವಲಯದ ಕೇಂದ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶೈಲಾ ಚವಲಗಿ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಮಧುಮತಿ ಪಾಟೀಲ್,ಸಂತೋಷ ತಡಸಲ,ಕೆಂಚಪ್ಪ ಹೋಳ್ಕರ್,ಸಂಗಮೇಶ ದಂಡಾಪೂರ,ಮುತ್ತಪ್ಪ ವೆಂಕಟಾ ಪೂರ,ಅಭಿನಂದನ ಜರಾಳೆ,ಶಿಕ್ಷಕರಾದ ದೌಲತರಾವ್ ಶಿಂಧೆ ಶಿಕ್ಷಕರು ಹಾಜರಿದ್ದರು.