ಹುಬ್ಬಳ್ಳಿ –
ಹೊಸದೊಂದು ಕಲ್ಪನೆ ಮುಂದಿಟ್ಟುಕೊಂಡು ಕಾಂಗ್ರೇಸ್ ಪಕ್ಷದ ಯುವನಾಯಕ ರಜತ್ ಉಳ್ಳಾಗಡ್ಡಿಮಠ ಹುಬ್ಬಳ್ಳಿಯಲ್ಲಿ ಆರಂಭ ಮಾಡಿರುವ ರಜತ್ ಮನೆ ಮನೆಗೆ ಅಭಿಯಾನವು ಮುಂದುವರೆದಿದ್ದು 12ನೇ ದಿನ ಮುಂದುವರೆ ದಿದೆ.ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಈ ಒಂದು ಅಭಿಯಾನವನ್ನು ರಜತ್ ಉಳ್ಳಾಗಡ್ಡಿಮಠ ಮಾಡುತ್ತಿದ್ದು ಈ ಒಂದು ಯಾತ್ರೆಗೆ ಕ್ಷೇತ್ರದಲ್ಲಿ ಮುಂದುವರೆದಿದ್ದು ಮನೆ ಮನೆಗೆ ತೆರಳಿ ಪ್ರತಿಯೊಬ್ಬರನ್ನು ಭೇಟಿಯಾಗಿ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಆಲಿಸುತ್ತಿದ್ದು ಬರುವ ದಿನಗಳಲ್ಲಿ ಅವುಗಳ ಕುರಿತಂತೆ ಈಡೇ ರಿಸುವ ಮತ್ತು ಪ್ರಮುಖವಾಗಿ ಸಧ್ಯ ಯಾವುದಾ ದರೂ ಸಮಸ್ಯೆಗಳು ತೀವ್ರವಾಗಿದ್ದರೆ ಅವುಗಳ್ನು ಸ್ಥಳದಲ್ಲಿಯೇ ಪರಿಹಾರವನ್ನು ಮಾಡುತ್ತಿದ್ದಾರೆ.
ಈಗಲೇ ಕ್ಷೇತ್ರದಲ್ಲಿ ಈ ಒಂದು ಮನೆ ಮನೆಗೆ ರಜತ್ ಅಭಿಯಾನದ ಮೂಲಕ ಇವರು ಕಾಲಿಗೆ ಚಕ್ರವನ್ನು ಕಟ್ಟಿಕೊಂಡವರಂತೆ ತಿರುಗಾಡುತ್ತಿದ್ದು ಇನ್ನೂ ಹೋದಲ್ಲೇಲ್ಲ ಇವರಿಗೆ ಉತ್ತಮವಾಗಿ ಸ್ಪಂದನೆ ಸಿಗುತ್ತಿದ್ದು ಜನರಿಂದ ಅಭೂತಪೂರ್ವ ವಾದ ಬೆಂಬಲ ಕಂಡು ಬರುತ್ತಿದೆ.11ನೇ ದಿನ ನಗರದ 54ನೇ ವಾರ್ಡ್ ನ ಹೆಗ್ಗರಿ ಸೇರಿದಂತೆ ಹಲವು ಕಡೆಗಳಲ್ಲಿ ರಜತ್ ಉಳ್ಳಾಗಡ್ಡಿಮಠ ಅವರು ತಮ್ಮ ಬೆಂಬಲಿಗರೊಂದಿಗೆ ಸುತ್ತಾಡಿ ಮನೆಯ ಸಮಸ್ಯೆಗಳನ್ನು ಆಲಿಸಿದರು.
ಇನ್ನೂ ಇದರೊಂದಿಗೆ ಹೋದಲೇಲ್ಲಾ ಕಡೆ ಯಲ್ಲೂ ಮಾನವೀಯತೆ,ಭಾವನಾತ್ಮಕತೆಯ ಸಮ್ಮಿಲನಕ್ಕೆ ಸಾಕ್ಷಿಯಾಗುತ್ತಿದೆ ಈ ಒಂದು ಮನೆ ಮನೆಗೆ ರಜತ್ ಅಭಿಯಾನವು, ಹೆಗ್ಗೇರಿ, ಚನ್ನಪ್ಪ ನ್ನಕೇರಿ,ಏಕತಾ ನಗರ ಮತ್ತು ಮಹಾಲಕ್ಷ್ಮಿ ನಗರ ದಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿದ್ದು ಇದನ್ನೇಲ್ಲ ವನ್ನು ನೋಡುತ್ತಿದ್ದರೆ ಪ್ರೀತಿಯಿಂದ ಇವರಿಗೆ ಬರುವ ದಿನಗಳಲ್ಲಿ ಇವರೊಂದಿಗೆ ಇರುವ ಭರವಸೆಯನ್ನು ನೀಡುತ್ತಿದ್ದಾರೆ.ಇದರೊಂದಿಗೆ ಪ್ರತಿಯೊಂದು ಮನೆಗೂ ಇವರು ಕ್ಯಾಲೆಂಡರ್ ಗಳನ್ನು ವಿತರಣೆ ಮಾಡುತ್ತಿದ್ದು ಈ ಒಂದು ಕಾರ್ಯಕ್ರಮ ಕ್ಷೇತ್ರದಲ್ಲಿ ಮುಂದುವರೆದಿದ್ದು ಇವರೊಂದಿಗೆ ಯುವಕರ ಟೀಮ್ ಅಭಿಮಾನಿ ಗಳು ಪಕ್ಷದ ಕಾರ್ಯಕರ್ತರು ಸೇರಿದಂತೆ ಹಲ ವರು ಸಾಥ್ ನೀಡುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..