This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಹಾವೇರಿ

ಹಾವೇರಿ ಜಿಲ್ಲೆಯಲ್ಲಿ ರಜತ್ ಉಳ್ಳಾಗಡ್ಡಿಮಠ ಮಿಂಚಿನ ಸಂಚಾರ – ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಸಂಘಟನೆಯೊಂದಿಗೆ ಹಲವಾರು ವಿಚಾರಗಳ ಕುರಿತಂತೆ ಸಭೆ ಮಾಡಿ ಯುವ ನಾಯಕ…..

WhatsApp Group Join Now
Telegram Group Join Now

ಹಾವೇರಿ

ಹಾವೇರಿ ಜಿಲ್ಲೆಯಲ್ಲಿ ರಜತ್ ಉಳ್ಳಾಗಡ್ಡಿಮಠ ಮಿಂಚಿನ ಸಂಚಾರ – ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಸಂಘಟನೆಯೊಂದಿಗೆ ಹಲವಾರು ವಿಚಾರಗಳ ಕುರಿತಂತೆ ಸಭೆ ಮಾಡಿ ಯುವ ನಾಯಕ ಹೌದು…..

ಇನ್ನೇನು ಲೋಕಸಭಾ ಚುನಾವಣೆಗೆ ಕೆಲವೆ ಕೆಲವು ದಿನಗಳು ಬಾಕಿ ಇರುವಾಗಲೇ ಇತ್ತ ಎಲ್ಲಾ ಪಕ್ಷದವರು ಭರ್ಜರಿಯಾದ ಸಿದ್ದತೆಗಳನ್ನು ಆರಂಭ ಮಾಡಿದ್ದು ಇದರ ನಡುವೆ ಧಾರವಾಡ ಜಿಲ್ಲೆಯಲ್ಲೂ ಕೂಡಾ ಚುನಾವಣೆಯ ಕಾರ್ಯ ಚಟುವಟಿಕೆಗಳು ಆರಂಭಗೊಂಡಿದ್ದು ಕೈ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಕೂಡಾ ಪಕ್ಷ ಸಂಘಟನೆಯೊಂದಿಗೆ ಅಲ್ಲಲ್ಲಿ ಸಭೆ ಮಾಡುತ್ತಾ ಚುನಾವಣೆಯ ಸಿದ್ದತೆಗಳನ್ನು ಆರಂಭ ಮಾಡಿದ್ದಾರೆ.

ಈ ಹಿಂದೆ ವಿಧಾನ ಸಭಾ ಚುನಾವಣೆಯಲ್ಲೂ ಕೂಡಾ ಅಧಿಕಾರ ಇರಲಿ ಇಲ್ಲದಿರಲಿ ಪಕ್ಷ ಸಂಘಟನೆಯನ್ನು ಮಾಡುತ್ತಾ ಹಗಲಿರುಳು ಸುತ್ತಾಡಿ ಕೊನೆಗೆ ತ್ಯಾಗಮಯಿಯಾಗಿ ಬೇರೆ ಯವರಿಗೆ ಅವಕಾಶವನ್ನು ನೀಡಿದ ರಜತ್ ಉಳ್ಳಾಗಡ್ಡಿಮಠ ಅವರು ಸಧ್ಯ ಲೋಕಸಭಾ ಚುನಾವಣೆಯ ಮೇಲೆ ಕಣ್ಣೀಟ್ಟಿದ್ದು ಹೀಗಾಗಿ ಕ್ಷೇತ್ರದ ತುಂಬೆಲ್ಲಾ ಸುತ್ತಾಡುತ್ತಿದ್ದಾರೆ.

ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲೂ ಪಕ್ಷ ಟಿಕೇಟ್ ತಪ್ಪಿಸಿದೆ ಎಂದುಕೊಂಡು ಮುನಿಸಿಕೊ ಳ್ಳದ ಇವರು ಸಧ್ಯ ಕಾಲಿಗೆ ಚಕ್ರವನ್ನು ಕಟ್ಟಿಕೊಂ ಡು ಮತ್ತೆ ಲೋಕಸಭಾ ಅಖಾಡಕ್ಕೆ ಇಳಿದಿದ್ದಾ ರೆ.ಈಗಾಗಲೇ ಕಳೆದ ಆರೇಳು ತಿಂಗಳುಗಳಿಂದ ಸಿದ್ದತೆಯನ್ನು ಮಾಡುತ್ತಿರುವ ಇವರು ಸಧ್ಯ ಹಾವೇರಿ ಜಿಲ್ಲೆಯ ಹಲವೆಡೆ ಮಿಂಚಿನ ಸಂಚಾ ರವನ್ನು ಮಾಡಿದರು.

ಪಕ್ಷ ಸಂಘಟನೆ ಸೇರಿದಂತೆ ಹಲವು ವಿಷಯಗಳ ಕುರಿತು ಪಕ್ಷದ ಮುಖಂಡರು ಹಾಗೂ ಕಾರ್ಯಕ ರ್ತರೊಂದಿಗೆ ಶಿಗ್ಗಾವಿಯಲ್ಲಿ ಸಭೆ ನಡೆಸಿದ ರಜತ್ ಉಳ್ಳಾಗಡ್ಡಿಮಠ ಅವರು ಸಂಘಟನೆ ಬಗ್ಗೆ ಚರ್ಚಿ ಸಿದರು.ಮೊದಲು ರೇವಣ ಸಿದ್ದೇಶ್ವರ ಸ್ವಾಮೀ ಜಿಯವರ ಆಶೀರ್ವಾದ ಪಡೆದುಕೊಂಡ ರಜತ್ ಉಳ್ಳಾಗಡ್ಡಿಮಠ ಅವರು ಇದರೊಂದಿಗೆ ಹಾವೇರಿ ಜಿಲ್ಲೆಯಲ್ಲಿ ಪ್ರವಾಸವನ್ನು ಮುಂದುವ ಸಿದಿದ್ದಾರೆ.

ಒಂದು ಕಡೆಗೆ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಇನ್ನ
ಹಾವೇರಿ ಜಿಲ್ಲೆಯ ಬಂಕಾಪುರ ಪಟ್ಟಣದ ಅರಳೇಶ್ವರ ಮಠಕ್ಕೆ ಭೇಟಿ ನೀಡಿದ ಇವರು ರೇವಣ್ಣ ಸಿದ್ದೇಶ್ವರ ಸ್ವಾಮೀಜಿಯವರ ಆಶೀ ರ್ವಾದ ಪಡೆದು ಪ್ರವಾಸವನ್ನು ಮುಂದುವರೆಸಿ ದರು.ಈ ವೇಳೆ ಮುಖಂಡರಾದ BC ಪಾಟೀಲ್, ಸುಲೇಮಾನ್ ಜಿಲ್ಲೆಯ ಶಿಗ್ಗಾವಿಯಲ್ಲೂ ಕೂಡಾ ಸಭೆ ನಡೆಸಿದ ರಜತ್ ಉಳ್ಳಾಗಡ್ಡಿಮಠ ಅವರು

ಪಕ್ಷದ ಸಂಘಟನೆ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿ ದರು.ಈ ಸಂದರ್ಭದಲ್ಲಿ ಯಾಸೀರ್‌ ಖಾನ್‌ ಪಠಾಣ್‌,ಬಿ ಸಿ ಪಾಟೀಲ್,ಚಂದ್ರು ಕೊಡ್ಲಿವಾಡ, ವಿಜಯ್ ಪಾಟೀಲ್, ಬಾಬರ್ ಬಾವೋಜಿ, ಗದಿಗೆಪ್ಪ, ಚನ್ನು ದೇಸಾಯಿ ಸೇರಿದಂತೆ ಅನೇಕರು ಹಾಜರಿದ್ದರು.ಇದರೊಂದಿಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಮಿಂಚಿನ ಸಂಚಾರವನ್ನು ಮಾಡಿದ

ಕೈ ಪಕ್ಷದ ಯುವ ಮುಖಂಡ ರಜತ್ ಉಳ್ಳಾ ಗಡ್ಡಿಮಠ ಅವರು ಪಕ್ಷದ ಸಂಘಟನೆ ಸೇರಿದಂತೆ ಲೋಕಸಭಾ ಚುನಾವಣೆಯ ತಾಲೀಮು ಆರಂಭ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹಾವೇರಿ…..


Google News

 

 

WhatsApp Group Join Now
Telegram Group Join Now
Suddi Sante Desk