ಧಾರವಾಡ –
ವೇಗವಾಗಿ ಬಂದ ಬೈಕ್ ವೊಂದು ನಿಯಂತ್ರಣ ತಪ್ಪಿ ಸ್ಕೀಡ್ ಆದ ಘಟನೆ ಧಾರವಾಡ ದಲ್ಲಿ ನಡೆದಿದೆ.ಧಾರವಾಡದ ಕೆಲಗೇರಿಯ ಈಶ್ವರ ದೇವಾಲಯ ಬಳಿ ಈ ಒಂದು ಘಟನೆ ನಡೆದಿದೆ.ವೇಗವಾಗಿ ಬಂದ ಬೈಕ್ ಸವಾರ ರಸ್ತೆಯಲ್ಲಿನ ಹಂಪ್ಸ್ ನ್ನು ನೋಡದೆ ದಾಟಿಸಿದ್ದು ಈ ಒಂದು ಸಮಯ ದಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಸ್ಕೀಡ್ ಆಗಿ ಬಿದ್ದಿದ್ದು
ಇನ್ನೂ ತೀವ್ರವಾಗಿ ಗಾಯಗೊಂಡ ಇವನನ್ನು ಸ್ಥಳದಲ್ಲೇ ಹೊರಟಿದ್ದ ಸುದ್ದಿ ಸಂತೆ ಯ ಹಿರಿಯ ವರದಿಗಾರ ಮಂಜು ನಾಥ ಸರ್ವಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ ತುರ್ತಾಗಿ ಅಂಬ್ಯೂಲೆನ್ಸ್ ವಾಹನವನ್ನು ತರಿಸಿ ಆಸ್ಪತ್ರೆಗೆ ಶಿಪ್ಟ್ ಮಾಡಿ ಮಾನವೀಯತೆ ಮೆರೆದಿದ್ದಾರೆ
ಇದರೊಂದಿಗೆ ಸಾಮಾಜಿಕ ಜವಾಬ್ದಾರಿ ತೋರಿಸಿದ್ದಾರೆ. ಇವರ ಈ ಒಂದು ಕಾರ್ಯಕ್ಕೆ ಮಂಜುನಾಥ ಬಡಿಗೇರ ಪರಶುರಾಮ ಗೌಡರ,ಶ್ರೀಪಾದ ಕಮ್ಮಾರ,ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ