This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ತುರ್ತು ಕಾರ್ಯಕಾರಣಿ ಸಭೆ ಕರೆದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು – ಬಜೆಟ್ ನಲ್ಲಿ ಘೋಷಣೆ ಯಾಗದ 7ನೇ ವೇತನ ಆಯೋಗ,NPS ಕುರಿತು ನಿರ್ಧಾರವಾಗಲಿದೆ ಭವಿಷ್ಯ


ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಸಂಘಟನೆಯ ತುರ್ತು ಕಾರ್ಯಕಾರಣಿ ಸಭೆಯನ್ನು ಕರೆದಿದ್ದಾರೆ ಹೌದು ಈಗಾಗಲೇ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ವಿಚಾರ ಕುರಿತು 7 ನೇ ವೇತನ ಆಯೋಗ ವನ್ನು ರಚನೆ ಮಾಡಲಾಗಿದ್ದು ಇದರ ಬೆನ್ನಲ್ಲೇ ಈ ಒಂದು ಸಮಿತಿ ಕೂಡಾ ಕಾರ್ಯ ಚಟುವಟಿಕೆ ಗಳನ್ನು ಮಾಡುತ್ತಿದೆ.

ಡಾ ಸುಧಾಕರ್ ನೇತೃತ್ವದಲ್ಲಿ ಈ ಒಂದು ಸಮಿತಿ ಯೂ ಕಾರ್ಯವನ್ನು ಮಾಡುತ್ತಿದ್ದು ಆದರೆ ಇತ್ತ ಮುಖ್ಯಮಂತ್ರಿ ಮಂಡಿಸಿದ ಬಜೆಟ್ ನಲ್ಲಿ 7 ನೇ ವೇತನ ಆಯೋಗದ ವಿಚಾರ ಮತ್ತು NPS ನೌಕರರ ಕುರಿತು ಪ್ರಸ್ತಾಪ ವನ್ನು ಮಾಡಿಲ್ಲ ಹೀಗಾಗಿ ಸಿಡಿದೆದ್ದಿರುವ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಈಗ ಮುಂದಿನ ಹೋರಾಟದ ಕುರಿತು ಅಂತಿಮವಾಗಿ ಚರ್ಚೆ ಯನ್ನು ಮಾಡುವ ನಿಟ್ಟಿನಲ್ಲಿ ಸಂಘದ ತುರ್ತು ಕಾರ್ಯಕಾರಣಿ ಸಭೆಯನ್ನು ಕರೆದಿದ್ದಾರೆ

ಈ ಒಂದು ತುರ್ತು ಕಾರ್ಯಕಾರಣಿ ಸಭೆಯಲ್ಲಿ  ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಬಜೆಟ್ ನಲ್ಲಿ ಘೋಷಣೆ ಯಾಗದ 7ನೇ ವೇತನ ಆಯೋಗ,NPS ಕುರಿತು ಚರ್ಚೆ ಮಾಡಿ ಮುಂದೆ ಹೇಗೆ ಹೋರಾಟ ಮಾಡಬೇಕು ಎಂಬ ಕುರಿತು ನಿರ್ಧಾರವನ್ನು ತಗೆದುಕೊಳ್ಳಲಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News Join The Telegram Join The WhatsApp

 

 

Suddi Sante Desk

Leave a Reply