ಪ್ರತಿಭಟನೆಗೆ ನಿರ್ಧಾರ ಕೈಗೊಂಡ ಶಿಕ್ಷಕರು – ರಾಜ್ಯಾಧ್ಯಕ್ಷರ ಕರೆ ಆಗಸ್ಟ್ 12 ರಂದು ಶಿಕ್ಷಕರ ಪ್ರತಿಭಟನೆ…..

Suddi Sante Desk
ಪ್ರತಿಭಟನೆಗೆ ನಿರ್ಧಾರ ಕೈಗೊಂಡ ಶಿಕ್ಷಕರು – ರಾಜ್ಯಾಧ್ಯಕ್ಷರ ಕರೆ ಆಗಸ್ಟ್ 12 ರಂದು ಶಿಕ್ಷಕರ ಪ್ರತಿಭಟನೆ…..

ಚಾಮರಾಜನಗರ

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರು ಕರೆ ನೀಡಿರುವ ಮೇರೆಗೆ ಆ.12 ರಂದು ನಗರದಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಹಕ್ಕೊ ತ್ತಾಯ ಸಲ್ಲಿಸಲು ತೀರ್ಮಾನಿಸಲಾಗಿದೆ’ ಎಂದು ಜಿಲ್ಲಾಧ್ಯಕ್ಷ ಮಾದಪ್ಪ ತಿಳಿಸಿದರು ನ್ಯಾಯಾಲಯದ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಕರೆದಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,

ಶಿಕ್ಷಕರ ಬಹುದಿನದ ಬೇಡಿಕೆಯಾದ ಸಿ ಅಂಡ್ ಆರ್ ತಿದ್ದುಪಡಿ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನೀಡಿದ್ದ ಭರವಸೆ ಈಡೇರದ ಕಾರಣ ಸಂಘವು ಮತ್ತೆ ರಾಜ್ಯ ವ್ಯಾಪ್ತಿ ಹಂತ ಹಂತವಾಗಿ ಹೋರಾಟ ನಡೆಸಲು ತೀರ್ಮಾನಿಸಿದೆ’ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಮಾತನಾಡಿ, ‘2016ರಲ್ಲಿ ಸಿ ಅಂಡ್ ಆರ್ ವೃಂದವಾರು ನೇಮಕಾತಿ ತಿದ್ದುಪಡಿ ಆದಾಗ ಆಗಿರುವ ಸಮಸ್ಯೆ 8 ವರ್ಷಗಳಾದರೂ ಸರಿಪಡಿಸುವಂತೆ ಅನೇಕ ಬಾರಿ ಒತ್ತಾಯಿಸುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ. 2024ರ ಆಗಸ್ಟ್ 12ರಲ್ಲಿ ಮುಖ್ಯಮಂತ್ರಿಗಳೇ ವೃಂದ ಮತ್ತು ನೇಮಕಾತಿಯ ನಿಯಮದಲ್ಲಿ ತಪ್ಪಾಗಿದೆ,

ಒಂದು ತಿಂಗಳ ಒಳಗೆ ಸರಿಪಡಿಸುವುದಾಗಿ ಹೇಳಿ ಒಂದು ವರ್ಷ ಆಗಲಿದೆ. ಇನ್ನೂ ಬಗೆಹರಿದಿಲ್ಲ’ ಎಂದರು ಆದ್ದರಿಂದ ಈ ಬಾರಿ ನಮ್ಮ ಬೇಡಿಕೆಗಳನ್ನು ಈಡೇರಿ ಸಬೇಕು, ಇಲ್ಲದಿದ್ದರೆ ಶಿಕ್ಷಕರ ದಿನಾಚರಣೆಯನ್ನು‌ ಬಹಿಷ್ಕರಿಸಲಾಗುವುದು. ಆ.12 ರಂದು ನಗರದ ಜಿಲ್ಲಾಡಳಿತ ಭವನದಲ್ಲಿ ಸಂಜೆ 4.30ಕ್ಕೆ ಜಿಲ್ಲೆಯ ಶಿಕ್ಷಕರು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿ ಗೊಳಿಸಬೇಕು’ ಎಂದು ಮನವಿ ಮಾಡಿದರು.

ಸಭೆಯಲ್ಲಿ ಸಂಘದ ಖಜಾಂಚಿ ಸಲೀನ, ಸಂಘಟನಾ ಕಾರ್ಯದರ್ಶಿ ಮಹದೇವಸ್ವಾಮಿ, ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಸಿ.ಕೆ. ರಾಮಸ್ವಾಮಿ, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷ ಶಿವಪ್ರಸಾದ್, ಹನೂರು ತಾಲ್ಲೂಕು ಅಧ್ಯಕ್ಷ ಕೃಷ್ಣೇಗೌಡ, ಯಳಂದೂರು ತಾಲ್ಲೂಕು ಅಧ್ಯಕ್ಷ ಸೋಮಣ್ಣ, ಸಂಘದ ಪದಾಧಿಕಾರಿಗಳಾದ ನಂದೀಶ್, ನಾಗರಾಜು, ನಾಗಸಂದ್ರ, ಎಂ.ಡಿ.ಮಹದೇವಯ್ಯ ಪಾಲ್ಗೊಂಡಿದ್ದರು.

ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.