ಬೆಂಗಳೂರು –
ನೊಂದಾಯಿತ ಶಿಕ್ಷಕರ ಸಂಘಟನೆ ಗಳಿಂದ ಬೆಂಗಳೂರು ಚಲೋ ಗೆ ಸಿದ್ದರಾದರು ಹತ್ತು ಸಾವಿರ ಶಿಕ್ಷಕರು.ಹೌದು ರಾಜ್ಯದ ತಾಲ್ಲೂಕು ಜಿಲ್ಲಾ ಘಟಕ ದಿಂದ ವೆಬಿನಾರ್ ಮುಖಾಂತರ ಬೆಂಗಳೂರು ಚಲೋ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡು ನಿರ್ಣಯವನ್ನು ತೆಗೆದುಕೊಂಡಿದ್ದಾರೆ ನಾಡಿನ ವರ್ಗಾವಣೆ ವಂಚಿತ ಶಿಕ್ಷಕ ಬಂಧುಗಳು
ವರ್ಗಾವಣೆ ಇಲ್ಲದೆ ಕಂಗಾಲಾಗಿರುವ ರಾಜ್ಯದ ಶಿಕ್ಷಕರು ಸ್ವಯಂ ಪ್ರೇರಿತವಾಗಿ ಗ್ರಾಮೀಣ ಪ್ರಾಥಮಿಕ ಮತ್ತು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘ ಮತ್ತು ನೊಂದಾಯಿತ ಶಿಕ್ಷಕರ ಸಂಘಟನೆ ಗಳಿಂದ ಬೃಹತ್ ಪ್ರತಿಭಟನೆ ನೆ ಕರೆ ನೀಡಲಾಗಿದೆ
ವರ್ಗಾವಣೆಯ ವಿಚಾರದಲ್ಲಿ ಬೇಡಿಕೆಗಳಿಕೆ ಬೆಂಬಲ ನೀಡುವ ಉದ್ದೇಶದಿಂದ ತಾಲ್ಲೂಕು ಜಿಲ್ಲಾ ಘಟಕ ದಲ್ಲಿ ವೆಬಿನಾರ ಸಭೆಗಳನ್ನು ಮಾಡಿ ಸಾವಿರಾರು ಶಿಕ್ಷಕರು ಬೆಂಗಳೂರು ಚೆಲೇೂ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ
ಹೌದು ಕಳೆಷ ಹತ್ತು ಹದಿನೈದು ಇಪ್ಪತ್ತು ವರ್ಷಗಳಿಂ ದ ಸೇವೆ ಸಲ್ಲಿಸಿದ್ದೇವೆ ನಮ್ಮ ಮೂಲ ಜಿಲ್ಲೆಗೆ ವರ್ಗಾ ವಣೆ ನೀಡಬೇಕು.ಇನ್ನೂ ಈಗಾಗಲೇ ಪಶ್ಚಿಮ ಬಂಗಾಳ ದಲ್ಲಿ ಸ್ವಂತ ಜಿಲ್ಲೆಗೆ ವರ್ಗಾವಣೆ ಏಕಕಾಲ ದಲ್ಲಿ ನೀಡಲಾಗಿದ್ದು ಅದೇ ಮಾದರಿಯಲ್ಲಿ ನಮಗೂ ವರ್ಗಾವಣೆ ನೀಡಬೇಕೆಂದು ಉಗ್ರ ಹೋರಾಟಕ್ಕೆ ಬೆಂಗಳೂರು ಚಲೋ ಸತ್ಯಾಗ್ರಹ ಕ್ಕೆ ಸುಮಾರು ಹತ್ತು ಸಾವಿರ ಶಿಕ್ಷಕರು ಸಿದ್ದರಾಗಿದ್ದಾರೆ.
ಈಗಾಗಲೇ ಈ ಒಂದು ಬೆಂಗಳೂರು ಚಲೋ ದಲ್ಲಿ ಪಾಲ್ಗೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆಂದು ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾ ಧ್ಯಕ್ಷ ಪವಾಡೆಪ್ಪ ಹಾಗೂ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಈ ಒಂದು ವಿಚಾರ ಕುರಿತು ಸುದ್ದಿ ಸಂತೆ ಗೆ ಮಾಹಿತಿ ನೀಡಿದ್ದಾರೆ
ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಬಡಿಗೇರ್ ಮಲ್ಲಿಕಾರ್ಜುನ ಉಪ್ಪಿನ ಕಾರ್ಯಾಧ್ಯಕ್ಷೆ ಕೆ ಬಿ ಕುರಹಟ್ಟಿ ಹಾಗೂ ಪರಿಷತ್ತಿನ ಅಧ್ಯಕ್ಷರ ಗುರು ತಿಗಡಿ,ಎಲ್ ಐ ಲಕ್ಕಮ್ಮನವರ ಪದವಿಧರ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಎಸ್ ವೈ ಸೊರಟಿ
ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷ ರಾದ ಲತಾ ಮುಳ್ಳೂರ ಇವರ ನೇತೃತ್ವದಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದೆ
ಒಟ್ಟಾರೆ ಮತ್ತೊಂದು ದೊಡ್ಡ ಪ್ರಮಾಣದ ಹೋರಾಟಕ್ಕೆ ಗ್ರಾಮೀಣ ಶಿಕ್ಷಕರ ಸಂಘದ ನೇತೃತ್ವದಲ್ಲಿ ಸಿದ್ದವಾಗುತ್ತಿದ್ದು ಇನ್ನೇನು ಬೆಂಗಳೂರು ಚಲೋ ಗೆ ಶಿಕ್ಷಕರು ಬೆಂಬಲ ನೀಡಿ ಸಿದ್ದರಾಗಬೇಕು ಅಂದಾಗ ಇದಕ್ಕೆ ಅರ್ಥ ಬರುತ್ತದೆ