ಬೆಂಗಳೂರು –
ಸಧ್ಯ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆಗಾಗಿ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ.ಈಗಾಗಲೇ ಈ ಒಂದು ಸಮಿತಿ ಕಾರ್ಯ ಚಟುವಟಿಕೆಗಳನ್ನು ಆರಂಭ ಮಾಡಿದ್ದು ಒಂದೊಂದಾಗಿ ವರದಿ ಸಿದ್ದತೆ ಕುರಿ ತಂತೆ ನಿವೃತ್ತ ಐಎಎಸ್ ಅಧಿಕಾರಿ ಡಾ ಸುಧಾಕರ್ ಕೆಲಸ ಕಾರ್ಯಗಳು ನಡೆಯುತ್ತಿವೆ.
ಸಧ್ಯ ಮುಂದೆ ಬರುವ ಸಾಲು ಸಾಲು ಚುನಾವಣೆ ಗಳನ್ನು ಗಮನದಲ್ಲಿಟ್ಟುಕೊಂಡಿರುವ ಈ ಒಂದು ಸಮಿತಿಯು ತನ್ನ ಕಾರ್ಯವನ್ನು ಒಂದಿಷ್ಟು ಚುರು ಕುಗೊಳಿಸಿದ್ದು ಹೀಗಾಗಿ ರಾಜ್ಯ ಸರ್ಕಾರ ನೀಡಿ ರುವ ಕಾಲ ಮೀತಿಯ ಮುಂಚೆಯೇ ವರದಿಯೂ ಸಮಿತಿಯಿಂದ ಸಲ್ಲಿಕೆಯಾಗಲಿದೆ ಎಂಬ ವಿಶ್ವಾಸ ವನ್ನು ರಾಜ್ಯದ ಸರ್ಕಾರಿ ನೌಕರರ ಸಂಘವು ಅಂದುಕೊಂಡಿದೆ.
ಇದು ಒಂದು ವಿಚಾರವಾದರೆ ಇನ್ನೂ ಪ್ರಮುಖ ವಾಗಿ ಇದೇ ಮೊದಲ ಭಾರಿಗೆ ಅವಧಿ ಮುನ್ನವೇ ವೇತನ ಪರಿಷ್ಕ್ರರಣೆಗಾಗಿ ಸಮಿತಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ.ಹೌದು 4 ವರ್ಷ 7 ತಿಂಗಳಿಗೆ ಆಯೋಗವನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ. ಮೊದಲು ವೇತನ ಆಯೋಗವನ್ನು ಐದೂವರೆ ವರ್ಷಕ್ಕೆ ರಚನೆ ಮಾಡಲಾಗುತ್ತಿತ್ತು.
ಅದು ಸಾಕಷ್ಟು ಹೋರಾಟ ಒತ್ತಾಯವನ್ನು ಮಾಡಿದ ನಂತರ ಗಂಭೀರವಾಗಿ ಪರಿಗಣಿಸಿದ ಸರ್ಕಾರಗಳು ರಚನೆ ಮಾಡುತ್ತಿದ್ದವು ಆದರೆ ಈ ಬಾರಿ ಅದ್ಯಾವುದು ಇಲ್ಲದೇ ಅವಧಿ ಮುನ್ನವೇ ಆಯೋಗವನ್ನು ರಚನೆ ಮಾಡಲಾಗಿದೆ.
ಇನ್ನೂ ಆಯೋಗವು ಅಧ್ಯಯನ ನಡೆಸಿ ವರದಿ ನೀಡುವಷ್ಟರಲ್ಲಿ ಹೆಚ್ಚಿನ ಸಮಯ ಕಳೆದು ಹೋಗುತ್ತಿತ್ತು. ಆದರೆ ಈ ಬಾರಿ 4 ವರ್ಷ 7 ತಿಂಗಳಿಗೆ ಆಯೋಗ ರಚನೆ ಮಾಡಲಾಗಿದೆ. ಆಯೋಗ ತನ್ನ ವರದಿ ಸಲ್ಲಿಸಲು ಸರ್ಕಾರ 6 ತಿಂಗಳ ಗಡುವನ್ನು ಏನೋ ನಿಗದಿ ಮಾಡಿ ನೀಡಿದೆ
ಈಗಾಗಲೆ ಆಯೋಗಕ್ಕೆ ಬೆಂಗಳೂರಿನಲ್ಲಿ ಕಚೇರಿ ಸಿಬ್ಬಂದಿ ಅಧಿಕಾರಿಗಳನ್ನು ಕೂಡಾ ನೀಡಲಾಗಿದ್ದು ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿಯೇ ಸಮಿತಿಯ ವರದಿಯನ್ನು ಪೂರ್ಣಗೊಳಿಸಿ ತನ್ನ ಕಂಪ್ಲೀಟ್ ರಿಪೋರ್ಟ್ ನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಿದ್ದು ಸಮಿತಿಯಿಂದ ವರದಿ ಸಲ್ಲಿಕೆಯಾದ ಕೂಡಲೇ ಸರ್ಕಾರವು ಅನುಷ್ಠಾನಗೊಳಿಸಿ ಆದೇಶವನ್ನು ಮಾಡಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……