This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State Newsಕಲ್ಬುರ್ಗಿ

ರಾಜ್ಯ BJP ಯಲ್ಲಿ ಹೊಸ ಸಂಚಲನ ಸೃಷ್ಟಿಸಿದ BSY ಬಾಂಬ್ – ಹಾಲಿ ಶಾಸಕರಿಗೆ ತಪ್ಪಲಿದೆ ಟಿಕೆಟ್ ಧಾರವಾಡ ಜಿಲ್ಲೆಯಲ್ಲೂ ಇದ್ದಾರಂತೆ ಲಿಸ್ಟ್ ನಲ್ಲಿ……


ಕಲಬುರಗಿ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಒಂದೇ ಒಂದು ಹೇಳಿಕೆ ರಾಜ್ಯ BJP ಯಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ ಹೌದು ಸಧ್ಯ ರಾಜ್ಯದ ರಾಜ್ಯಕಾರಣದಲ್ಲಿ ಹೊಸ ಮಿಂಚಿನ ಸಂಚಾರ ವನ್ನು ಉಂಟು ಮಾಡಿದೆ.

ಹಾಲಿಯ 4 ರಿಂದ 6 ಆರು ಶಾಸಕರನ್ನು ಹೊರತುಪಡಿಸಿದರೆ ಬಹುತೇಕ ಎಲ್ಲರಿಗೂ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕಲಬುರಗಿ ಯಲ್ಲಿ ಮಾತನಾಡಿದ ಅವರು, ಹಾಲಿ ಬೆರಳೆಣಿಕೆಯ ಶಾಸಕರನ್ನು ಹೊರತುಪಡಿಸಿದರೆ ಬಹುತೇಕ ಎಲ್ಲರಿಗೂ ಟಿಕೆಟ್ ಸಿಗಲಿದೆ.ಸಮಯ ಮತ್ತು ಪರಿಸ್ಥಿತಿ ನೋಡಿಕೊಂಡು ಕೇಂದ್ರ ವರಿಷ್ಠರು ರಾಜ್ಯ ಘಟಕದ ನಾಯಕರ ಜೊತೆ ಚರ್ಚಿಸಿ ಟಿಕೆಟ್ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ನೀಡ ಬೇಕೆಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಗೆಲವೇ ಮಾನದಂಡವಾಗಿರುವುದರಿಂದ ಪ್ರತಿ ಯೊಂದು ಕ್ಷೇತ್ರಕ್ಕೂ ಅಳೆದು ತೂಗಿ ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಟಿಕೆಟ್ ಕೊಡುತ್ತಾರೆ. ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು

ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಶಿಕಾರಿಪುರ ಸೇರಿದಂತೆ ಬೇರೆ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬಹುದು.ಕಾರ್ಯಕರ್ತರು ಇದೇ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕೆಂದು ಒತ್ತಡ ಹಾಕುತ್ತಿದ್ದಾರೆ ಎಂದರು.

ಅಂತಿಮವಾಗಿ ವಿಜಯೇಂದ್ರ ಎಲ್ಲಿಂದ ಸರ್ಧೆ ಮಾಡಬೇಕೆಂಬುದು ಪಕ್ಷದ ವರಿಷ್ಠರು ತೀರ್ಮಾ ನಿಸುತ್ತಾರೆ.ಇದಕ್ಕೆ ಪ್ರತಿಯೊಬ್ಬರು ಬದ್ದರಾಗಿ ಇರಬೇಕು. ವ್ಯಕ್ತಿ ಪ್ರತಿಷ್ಟೆಗಿಂತ ಪಕ್ಷದ ಗೆಲುವು ಮುಖ್ಯ ವರಿಷ್ಠ ಮಂಡಳಿಯ ತೀರ್ಮಾನಕ್ಕೆ ಎಲ್ಲರೂ ತಲೆ ಬಾಗಬೇಕಾಗುತ್ತದೆ ಎಂದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಯಡಿ ಯೂರಪ್ಪ ಅವರು ಆ ಪಕ್ಷದಲ್ಲಿ ಯಾರೊಬ್ಬರೂ ನಾಯಕರಿಲ್ಲ ಹೇಳುವವರು ಕೇಳುವವರು ಇಲ್ಲದೆ ಅನಾಥವಾಗಿದೆ.ಮೊದಲು ನಿಮ್ಮ ನಾಯಕ ಯಾರು ಎಂದು ಬಹಿರಂಗಪಡಿಸುವಂತೆ ಸವಾಲು ಹಾಕಿದರು.ಬಿಜೆಪಿಗೆ ಬಲಿಷ್ಠ ನಾಯಕತ್ವವಿದೆ. ಆದರೆ ಕಾಂಗ್ರೆಸ್‍ನಲ್ಲಿ ಅಂತಹ ಪರಿಸ್ಥಿತಿ ಇಲ್ಲ ಎಂದರು.

ಸುದ್ದಿ ಸಂತೆ ಪೊಲಿಟಿಕಲ್ ಡೆಸ್ಕ್…..

 


Google News Join The Telegram Join The WhatsApp

 

 

Suddi Sante Desk

Leave a Reply