ನವದೆಹಲಿ –
ಕೊರೋನಾದಿಂದಾಗಿ ಮಾರ್ಚ್ 2020 ರಿಂದ ಶಾಲೆಗಳು ಬಂದ್ ಆಗಿದ್ದು ಮಧ್ಯಾಹ್ನದ ಬಿಸಿ ಊಟದ ಯೋಜನೆಯ ವಿವರವಾದ ಲೆಕ್ಕ ಪರಿ ಶೋಧನೆ ಮತ್ತು ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಹೌದು ಅದರ ಅಡಿಯಲ್ಲಿ ಆಹಾರ ಭದ್ರತೆ ಭತ್ಯೆಯ ಭಾಗವಾಗಿ ಮಕ್ಕಳಿಗೆ ಆಹಾರ ಧಾನ್ಯಗಳು ಮತ್ತು ಅಡುಗೆ ವೆಚ್ಚವನ್ನು ರಾಜ್ಯಗಳಿಗೆ ನೀಡಲಾಗುತ್ತದೆ.ಕಳೆದ ಒಂದೂವರೆ ವರ್ಷದಲ್ಲಿ ಕೇಂದ್ರವು ಯೋಜನೆಯ ಫಲಾನುಭವಿ ಗಳಾದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 8 ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ತಲಾ 100 ರೂ. ನೀಡುತ್ತಿದೆ.
ಆದರೆ ಶಾಲೆಗಳು ಮುಚ್ಚಿರುವುದರಿಂದ ಈ ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬು ದನ್ನು ನೋಡಲು ಒಂದು ಪ್ರಮುಖ ವೃತ್ತಿಪರ ಸೇವಾ ಜಾಲದ ಸಂಸ್ಥೆಯನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಹಿರಿಯ ಶಿಕ್ಷಣ ಸಚಿವಾಲಯದ ಅಧಿಕಾರಿ ಯೊಬ್ಬರು ಹೇಳಿದ್ದಾರೆ.
ಎಂಡಿಎಂ ಮೂಲಕ, ದೇಶಾದ್ಯಂತ 11.4 ಲಕ್ಷ ಸರ್ಕಾರಿ ಶಾಲೆಗಳಲ್ಲಿ ವರ್ಷಕ್ಕೆ ಕನಿಷ್ಠ 200 ದಿನಗಳ ಕಾಲ ಸುಮಾರು 12 ಕೋಟಿ ಮಕ್ಕಳಿಗೆ ಆಹಾರ ವನ್ನು ನೀಡಲಾಗುತ್ತದೆ.ಹೆಚ್ಚಿನ ರಾಜ್ಯಗಳಲ್ಲಿ 9-12 ತರಗತಿಗಳಿಂದ ಶಾಲೆಗಳು ಆರಂಭವಾಗಿದ್ದರೂ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಇನ್ನೂ ಮುಚ್ಚಲ್ಪಟ್ಟಿರುವುದರಿಂದ, ಹಣ ಸರಿಯಾದ ಫಲಾನುಭವಿಗಳಿಗೆ ತಲುಪುತ್ತಿದೆ ಎಂದು ನಾವು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ ಎಂದಿದ್ದಾರೆ. ಕಳೆದ ವರ್ಷ ಸಚಿವಾಲಯವು ವಿದ್ಯಾರ್ಥಿಗಳಿಗೆ ವರ್ಷಕ್ಕೆ ಸುಮಾರು 1,200 ಕೋಟಿ ರೂಪಾಯಿ ಗಳನ್ನು ನೇರ ವರ್ಗಾವಣೆಯ ಮೂಲಕ ಒಂದು ಬಾರಿ ಪಾವತಿಯಾಗಿ ನೀಡುವುದಾಗಿ ಹೇಳಿತ್ತು
ಈ ಯೋಜನೆಯ ಅಡುಗೆ ವೆಚ್ಚದ ಘಟಕದಿಂದ ಹಣ ಬರುತ್ತದೆ. ಈ ನಿರ್ಧಾರವು ಮಕ್ಕಳ ಪೌಷ್ಟಿ ಕಾಂಶದ ಮಟ್ಟವನ್ನು ಕಾಪಾಡಲು ಮತ್ತು ಸವಾಲಿನ ಸಾಂಕ್ರಾಮಿಕ ಸಮಯದಲ್ಲಿ ಅವರ ರೋಗ ನಿರೋಧಕ ಶಕ್ತಿಯನ್ನು ರಕ್ಷಿಸಲು ಸಹಾಯ ಮಾಡು ತ್ತದೆ ಎಂದು ಸರ್ಕಾರ ಹೇಳಿದೆ ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಮಾರು 1,200 ಕೋಟಿ ರೂಪಾಯಿಗಳ ಹೆಚ್ಚುವರಿ ಹಣವನ್ನು ನೀಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.