ಬೆಂಗಳೂರು –
ರಾಜ್ಯ ಸರ್ಕಾರ ನಿಗಮ ಮಂಡಳಿ ಅಧ್ಯಕ್ಷರ ನಂತರ ಈಗ ನಗರಾಭಿವೃದ್ದಿ ಪ್ರಾಧಿಕಾರಗಳ ಅಧ್ಯಕ್ಷರ ನಾಮ ನಿರ್ದೇಶನ ವನ್ನು ರದ್ದು ಪಡಿಸಿದೆ.
ಶಿವಕುಮಾರ್ ಸಂಗೂರ- ಹಾವೇರಿ ನಗರಾಭಿವೃದ್ದಿ ಪ್ರಾಧಿಕಾರ, ಅಶ್ವಿನಿ – ಕೆಜಿಎಫ್, ನಾಗೇಶ್ ಪುಂಡಳಿಕ ಕಲಬುರ್ಗಿ- ಹುಬ್ಬಳ್ಳಿ ಧಾರವಾಡ, ಅಶೋಕ್ ಜಿರೆ ಹೊಸಪೇಟೆ, ರವಿಶಂಕರ್ ಮಿಜಾರ್ – ಮಂಗಳೂರು, ಆನಂದ್ ಚಿನ್ನತಂಬಿ- ಚಿಕ್ಕಮಗಳೂರು, ಲಲಾಟಮೂರ್ತಿ- ಹಾಸನ, ಪಿ.ಬಿ.ಶಾಂತಮೂರ್ತಿ- ಚಾಮರಾಜನಗರ, ಎಚ್.ವಿ.ರಾಜೀವ್ – ಮೈಸೂರು, ಕೆ.ಎಸ್ ರಮೇಶ್ ಹೊಳ್ಳ- ಮಡಿಕೇರಿ, ಬಸಲಿಂಗಪ್ಪ ಕಾಶಿನಾಥ ನಾವಲಗಿ- ಬಾಗಲಕೋಟೆ, ದಯಾಘನ್ ಪ್ರಲ್ಹಾದ್ ರಾವ್ ಧಾರವಾಡ್ಕರ್ – ಕಲಬುರ್ಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ನಾಮನಿರ್ದೇಶನವನ್ನು ಸರ್ಕಾರ ರದ್ದು ಪಡಿಸಿ ಆದೇಶ ಹೊರಡಿಸಿದೆ.