ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರಿಗೆ ಸಮಾಧಾನ ಹೇಳಿದ ಸಿ ಎಸ್ ಷಡಾಕ್ಷರಿ ಹೌದು 7ನೇ ವೇತನ ಆಯೋಗದ ಅವಧಿ ವಿಸ್ತರಣೆ ಬೆನ್ನಲ್ಲೇ ಸರ್ಕಾರ ರಾಜ್ಯಾಧ್ಯಕ್ಷರನ್ನು ಕೋಲಾರಕ್ಕೆ ವರ್ಗಾವಣೆ ಮಾಡಿತ್ತು. ಸರ್ಕಾರದ ಈ ಕ್ರಮದಿಂದಾಗಿ ರಾಜ್ಯ ಸರ್ಕಾರಿ ನೌಕರರು ಆಕ್ರೋಶಗೊಂಡಿದ್ದು ಇಂದು ಸುಮಾರು 300ಕ್ಕೂ ಹೆಚ್ಚು ನೌಕರರು ಜಿಲ್ಲೆ, ತಾಲೂಕುಗಳಿಂದ ಆಗಮಿಸಿ ಸರ್ಕಾರದ ಈ ಕ್ರಮದ ವಿರುದ್ಧ ಮುಷ್ಕರಕ್ಕೆ ಕರೆ ನೀಡಲು ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದರು
ನನ್ನ ವೈಯಕ್ತಿಕ ವರ್ಗಾವಣೆಯ ಕಾರಣಕ್ಕಾಗಿ ಸರ್ಕಾರಿ ನೌಕರರು ಪ್ರತಿಭಟಿಸುವುದು ನನಗೆ ಇಷ್ಟ ಇರುವುದಿಲ್ಲ ವೈಯಕ್ತಿಕವಾಗಿ ಸಂಘಟನೆ ಯನ್ನು ಬಳಸಿಕೊಂಡತಾಗುತ್ತದೆ ಆದ್ದರಿಂದ ನಿಮ್ಮ ಪ್ರೀತಿ ,ವಿಶ್ವಾಸ ಅನನ್ಯವಾಗಿದ್ದು ಅದಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ.
ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಅಲ್ಲಿವರೆಗೂ ಸಹಕರಿಸಿ. 7ನೇ ವೇತನ ಆಯೋಗದ ಜಾರಿ ಮತ್ತು NPS ರದ್ಧತಿ, ಖಾಲಿ ಹುದ್ದೆ ಭರ್ತಿ..ಪ್ರಮುಖವಾದ ಬೇಡಿಕೆಗಳು ನಮ್ಮ ಮುಂದಿದ್ದು ಈ ಸಂಬಂಧ ತುರ್ತಾಗಿ ಕಾರ್ಯಕಾರಿಣಿ ಸಭೆ ಕರೆದು ಆ ಬಗ್ಗೆ ನಿರ್ಣಯಿಸಲಾಗುವುದು
ಆ ಸಂದರ್ಭದಲ್ಲಿ ತಮ್ಮ ಸಹಕಾರ ಮತ್ತು ಪ್ರೀತಿ ಹೀಗೆ ಇರಲೆಂದು ಮನವಿ ಮಾಡಿದರು. ಇಂದು ಕಚೇರಿಗೆ ಆಗಮಿಸಿದ್ದ ಸರ್ಕಾರಿ ನೌಕರರು ಒಲ್ಲದ ಮನಸ್ಸಿನಿಂದ ಸಹಕಾರ ನೀಡಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..