ಆನೇಕಲ್ -
ಒಂದೇ ವಾರದಲ್ಲಿ ಇಬ್ಬರು ತಹಶೀಲ್ದಾರ ಅಮಾನತು – ಕರ್ತವ್ಯ ಲೋಪ ಹಿನ್ನಲೆಯಲ್ಲಿ ಅಮಾನತು ಮಾಡಿದ ರಾಜ್ಯ ಸರ್ಕಾರ
ಕರ್ತವ್ಯ ಲೋಪದ ಹಿನ್ನಲೆಯಲ್ಲಿ ತಹಶೀಲ್ದಾರ ರೊಬ್ಬರು ಅಮಾನತುಗೊಂಡಿರುವ ಘಟನೆ ಆನೇಕಲ್ ನಲ್ಲಿ ನಡೆದಿದೆ.ಶಿವಪ್ಪ ಲಮಾಣಿ ಅಮಾನತು ಗೊಂಡಿರುವ ತಹಶೀಲ್ದಾರ ರಾಗಿ ದ್ದಾರೆ.ಒಂದು ವಾರದಲ್ಲಿ ಆನೇಕಲ್ ನ ಇಬ್ಬರು ತಹಶಿಲ್ದಾರ್ ಗಳ ಅಮಾನತುಗೊಂಡಿ ದ್ದಾರೆ.
ಕರ್ತವ್ಯ ಲೋಪ ಮತ್ತು ಉಚ್ಚ ನ್ಯಾಯಾಲಯದ ಆದೇಶ ಪಾಲಿಸದ ಕಾರಣದ ಹಿನ್ನಲೆಯಲ್ಲಿ ಈ ಒಂದು ಅಮಾನತು ಮಾಡಲಾಗಿದೆ.2021 ರಲ್ಲಿ ಬೆಂಗಳೂರು ದಕ್ಷಿಣ ತಹಶಿಲ್ದಾರ್ ಆಗಿದ್ದ ವೇಳೆ ದೇವಾಲಯದ ಮಳಿಗೆಗಳ ವಿಚಾರವಾಗಿ ಕಂದಾಯ ಇಲಾಖೆ ಹಾಗೂ ದೇವಾಲಯದ ಕಮಿಟಿ ನಡುವೆ ನಡೆಯುತ್ತಿದ್ದ ವಾದ ವಿವಾದ ಗಳು.
ಬೇಗೂರು ಗ್ರಾಮದ ಶ್ರೀ ಸ್ಪೂರ್ತಿ ವಿನಾಯಕ ಹಾಗು ಶ್ರೀ ಸತ್ಯನಾರಾಯಣಸ್ವಾಮಿ ದೇವಾಲಯ ದ ಸಮಿತಿ ಪರವಾಗಿ ಉಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು ಉಚ್ಚ ನ್ಯಾಯಾಲಯವು ನೀಡಿದ್ದ ತೀರ್ಪಿನ ವಿರುದ್ಧವಾಗಿ ಕ್ರಮವಹಿಸಿದ್ದ ಅಂದಿನ ತಹಶಿಲ್ದಾರ್ ಶಿವಪ್ಪ ಲಮಾಣಿ, ತಹಶಿ ಲ್ದಾರ್ ಶಿವಪ್ಪ ಲಮಣಿ ವಿರುದ್ಧ ಒಂದು ಲಕ್ಷ ದಂಡ ವಿಧಿಸಿ ತನಿಖೆಗೆ ಆದೇಶಿಸಿದ್ದ ಸರ್ಕಾರ.
ಜಿಲ್ಲಾಧಿಕಾರಿಗಳ ಮುಖೇನ ದೋಷಾರೋಪಣ ಪಟ್ಟಿಯನ್ನು ತಹಶಿಲ್ದಾರ್ ಶಿವಪ್ಪ ಲಮಾಣಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಮಾನತು ಮಾಡ ಲಾಗಿದೆ.ಇನ್ನೂ ಇನ್ನೊಂದು ಪ್ರಕರಣದಲ್ಲಿ ಮತ್ತೊರ್ವ ತಹಶೀಲ್ದಾರರೊಬ್ಬರನ್ನು ಅಮಾನತು ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಆನೇಕಲ್…..