ಬಳ್ಳಾರಿ –
ಶಾಲೆಯಲ್ಲಿ ಬಿಸಿಯೂಟ ನಿರ್ವಹಣೆಯ ಹಣಕಾಸಿನ ದುರುಪಯೋಗ ಮತ್ತು ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ ಹೌದು ಕ್ಷೇತ್ರ ಶಿಕ್ಷಣಾಧಿಕಾ ರಿಗಳ ಕಾರ್ಯಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ ಪಶ್ಚಿಮ ವಲಯ ಕುರುಗೋಡು ಶಿಫಾರಸು ವರದಿಯ ಆಧಾರದ ಮೇರೆಗೆ ಅಮಾನತುಗೊಳಿಸಲಾಗಿದೆ.ಜಿಲ್ಲೆಯ ಕಂಪ್ಲಿ ಸಮೀಪದ ರಾಜು ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಗುರು ತಿಮ್ಮಣ್ಣ ರನ್ನು ಅಮಾನತು ಮಾಡಲಾಗಿದೆ.ತಿಮ್ಮಣ್ಣ ಅವರು ಶಾಲಾ ಬಿಸಿಯೂಟದ ಖಾತೆಯಲ್ಲಿ ರೂ.15 ಸಾವಿರ ಡ್ರಾ ಮಾಡಿ ಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ.
ಇದರೊಂದಿಗೆ 12,300 ರೂಪಾಯಿ ಅನ್ನು ಸೆಲ್ಫ್ ಡ್ರಾ ಮಾಡಿಕೊಂಡು ಓಚರ್ಗಳು ಖರ್ಚು ವೆಚ್ಚದ ರಸೀದಿಗ ಳನ್ನು ನಿರ್ವಹಿಸದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪವೂ ಇದೆ.ಅಷ್ಟೇ ಅಲ್ಲದೇ ಇದನ್ನು ವಿಚಾರಿಸಲು ಹೋಗಿದ್ದ ಅಧಿಕಾರಿಗಳಿಗೆ ಏಕವಚನದಲ್ಲಿ ಮಾತನಾಡಿ ದ್ದಾರೆ.ಹೀಗಾಗಿ ಬಿಸಿ ಊಟದ ಹಣ ದುರುಪಯೋಗ ಆರೋಪದಡಿ ಡಿಡಿಪಿಐ ಅಂದಾನಪ್ಪ ಎಂ ವಡಗೇರಿ ಆದೇಶ ಹೊರಡಿಸಿದ್ದಾರೆ.