ತುಮಕೂರು –
ಶಾಲೆ ಮುಗಿಸಿಕೊಂಡು ಮನೆಗೆ ಹೊರಟಿದ್ದ ಶಿಕ್ಷಕರೊಬ್ಬರು ಏಕಾಎಕಿಯಾಗಿ ಬಂದ ಹಳ್ಳದ ನೀರಿಗೆ ಸಿಕ್ಕು ತೇಲಿಕೊಂಡು ಹೋಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ ಹೌದು ಬೈಕ್ ಮೇಲೆ ಶಾಲೆಯಿಂದ ಶಿಕ್ಷಕ ಅರಿಫುಲ್ಲಾಖಾನ್ ಹೊರ ಟಿದ್ದರು ಹಳ್ಳದಲ್ಲಿ ನೀರು ಜೋರಾಗಿ ಬಂದಿದ್ದು ಇನ್ನೇನು ದಾಟಬೇಕು ಎನ್ನಬೇಕು ಅಷ್ಟರಲ್ಲಿ ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿದ್ದಾರೆ
ಅರಿಫುಲ್ಲಾಖಾನ್ ಸ್ನೇಹ ಜೀವಿ ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿರುವ ಇವರು ಉತ್ತಮ ಶಿಕ್ಷಕರಾಗಿ ಉರ್ದು ಕ್ಲಸ್ಟರ್ CRP ಯಾಗಿ ಕೆಲಸ ನಿರ್ವಹಿಸಿ ಪ್ರಸ್ತುತ GUHPS ದಾವೂದ್ ಪಾಳ್ಯ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವ ಹಿಸುತ್ತಿದ್ದರು.
ಇಂದು ಬೆಳಗ್ಗೆ ಶಾಲೆಗೆ ಹೋಗಿ ಸಂಜೆ 4-30 ಕ್ಕೆ ಶಾಲೆ ಮುಗಿಸಿಕೊಂಡು ಮನೆಗೆ ಮರಳಿ ಬರುವಾಗ ಸಿರಾ ಕೆರೆಯು ಕೊಡಿಬಿದ್ದಿರುವ ಕಾರಣ ಚನ್ನನಕುಂಟೆ ಹಳ್ಳದಲ್ಲಿ ನೀರು ರಭಸವಾಗಿ ಹರಿಯುವಾಗ ಆಯಾ ತಪ್ಪಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುತ್ತಾರೆ ಇವರ ಆತ್ಮಕ್ಕೆ ಶಾಂತಿ ಸಿಗಸಲಿ ಹಾಗೂ ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಜಿಲ್ಲೆಯ ಮತ್ತು ನಾಡಿನ ಶಿಕ್ಷಕರು ಪ್ರಾರ್ಥಿಸಿದ್ದಾರೆ.