ಹುಬ್ಬಳ್ಳಿ –
ನಾಡು ಕಂಡ ಶ್ರೇಷ್ಠ ಹಿರಿಯ ಉದ್ಯಮಿ ಡಾ ವಿಜಯ ಸಂಕೇಶ್ವರ ಅವರ ಜೀವನ ಕಥೆಯ ನ್ನಾಧರಿಸಿದ ವಿಜಯಾನಂದ ಚಿತ್ರವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವೀಕ್ಷಣೆ ಮಾಡಿದರು.
ಹೌದು ಹುಬ್ಬಳ್ಳಿಯ PVR ಚಿತ್ರ ಮಂದಿರದಲ್ಲಿ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಕೂಡಾ ಸಮಯವನ್ನು ಬಿಡುವು ಮಾಡಿಕೊಂಡ ಕೇಂದ್ರ ಸಚಿವರು ವಿಜಯಾನಂದ ಚಿತ್ರವನ್ನು ವೀಕ್ಷಣೆ ಮಾಡಿದರು.
ಎರಡೂವರೆ ಗಂಟೆಗಳ ಕಾಲ ಕುಳಿತುಕೊಂಡ ಸಚಿವರು ಸಂಪೂರ್ಣವಾಗಿ ಚಿತ್ರವನ್ನು ವೀಕ್ಷಣೆ ಮಾಡಿದರು.ಇದೇ ವೇಳೆ ಮಾತನಾಡಿ ಚಿತ್ರದ ಕುರಿತಂತೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಯುವ ಜನಾಂಗಕ್ಕೆ ಸರ್ಕಾರಿ ನೌಕರಿ ನೌಕರಿ ಎನ್ನುವವ ರಿಗೆ ಈ ಒಂದು ಚಿತ್ರವು ಸ್ಪೂರ್ತಿಯಾಗಿದೆ ಎಂದು ಬಣ್ಣಿಸಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..