ಬೆಂಗಳೂರು –
7ನೇ ವೇತನ ಆಯೋಗದ ವಿಚಾರ ಏನಾಯಿತು ಎಲ್ಲಿಗೆ ಬಂತು CM ಸಾಹೆಬ್ರೆ – ರಾಜ್ಯದ ಸರ್ಕಾರಿ ನೌಕರರ ಪ್ರಶ್ನೆಗಳಿಗೆ ಉತ್ತರಿಸುವರಿಲ್ಲ ಯಾರೊ ಬ್ಬರು ಮೌನವಾಗಿದೆ 7ನೇ ವೇತನ ಆಯೋಗದ ವಿಚಾರ ಹೌದು ರಾಜ್ಯದ ಸಮಸ್ತ ಸರ್ಕಾರಿ ನೌಕ ರರ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ರಾಜ್ಯ ಸರ್ಕಾರ ಈಗಾಗಲೇ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ.
ಈಗಾಗಲೇ ಈ ಒಂದು ಸಮಿತಿಗೆ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರನ್ನು ಕೂಡಾ ನೇಮಕ ಮಾಡಿದ್ದು ಸಮಿತಿ ಕೂಡಾ ವರದಿಯನ್ನು ಸಿದ್ದತೆ ಮಾಡಿದ್ದು ಇದೇಲ್ಲದರ ನಡುವೆ ಸಧ್ಯ ಸಮಿತಿಯು ಅವಧಿಯನ್ನು ಸಧ್ಯ ಎರಡು ಬಾರಿ ಮುಂದೂಡ ಲಾಗಿದೆ.ವರದಿಯನ್ನು ಸಿದ್ದ ಮಾಡಿದ್ದರು ಕೂಡಾ ರಾಜ್ಯ ಸರ್ಕಾರ ಅದ್ಯಾಕೊ ಏನೋ ವರದಿಯನ್ನು ಸ್ವೀಕಾರ ಮಾಡದೇ ಮತ್ತೆ ಸಧ್ಯ 6 ತಿಂಗಳುಗಳ ಕಾಲ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಇದೇಲ್ಲದರ ನಡುವೆ ಸಧ್ಯ ಈ ಒಂದು 7ನೇ ವೇತನ ಆಯೋಗ ಯಾವಾಗ ಜಾರಿಗೆ ಬರುತ್ತದೆ ಏನು ಎಂಬ ವಿಚಾರ ಕುರಿತಂತೆ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಪ್ರಶ್ನೆಗಳನ್ನು ಕೇಳ್ತಾ ಇದ್ದಾರೆ ಆದರೆ ನೌಕರರ ಆ ಆತಂಕದ ಪ್ರಶ್ನೆಗಳಿಗೆ ಯಾರು ಕೂಡಾ ಉತ್ತರಿಸುವವರು ಇಲ್ಲದಂತಾಗಿದೆ.ಈ ಒಂದು ವಿಚಾರ ಕುರಿತಂತೆ ಬೆಳಗಾವಿಯ ಚಳಿ ಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದವರು ಕೆಳಮನೆಯಲ್ಲಿ ಹೋರಾಟ ಮಾಡಿದ್ದಾರೆ.
ಇನ್ನೂ ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ಮಾತನಾಡಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು ದಿನಾಂಕ 9/11/2022ರ ಸರ್ಕಾರಿ ಆದೇಶದಲ್ಲಿ ತ್ರಿ ಸದಸ್ಯ ದ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ಆದೇಶಿಸಲಾಗಿರುತ್ತದೆ.ನಂತರ ದಿನಾಂಕ 6/11/2023ರ ಆದೇಶದಲ್ಲಿ ಆಯೋಗದ ಕಾಲಾವಧಿಯನ್ನು ದಿನಾಂಕ 15/3/2023ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸ ಲಾಗಿದೆ
ಪ್ರಸ್ತುತ ರಾಜ್ಯ ಸರ್ಕಾರವು ವೇತನ ಆಯೋಗದ ಅಂತಿಮ ವರದಿಯ ನಿರೀಕ್ಷೆಯಲ್ಲಿರುತ್ತದೆ ಎಂದಿದ್ದಾರೆ.ಇವರು ಹೇಳೊದು ಒಂದು ಆಗುತ್ತಿ ರುವುದು ಮತ್ತೊಂದು ಹೀಗಾಗಿ ಸಧ್ಯ 7ನೇ ವೇತನ ಆಯೋಗದ ವಿಚಾರದಲ್ಲಿ ರಾಜ್ಯ ಸರ್ಕಾರ ಯಾಕೆ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ ಯಾಕೇ ಮೀನಾಮೇಷ ಮಾಡು ತ್ತಿದೆ ಎಂಬ ಅನುಮಾನ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಕಾಡುತ್ತಿದೆ.
ಈ ಒಂದು ಪ್ರಶ್ನೆಗಳಿಗೆ ಭರವಸೆಯ ಉತ್ತರುಗಳು ರಾಜ್ಯದಲ್ಲಿ ಯಾರಿಂದಲೂ ಕಂಡು ಬರುತ್ತಿಲ್ಲ ಹೀಗಾಗಿ ದೊಡ್ಡದಾದ ಆತಂಕವೊಂದು ರಾಜ್ಯದ ಸಮಸ್ತ ಸರ್ಕಾರಿ ನೌಕರರಲ್ಲಿ ಕಾಡುತ್ತಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..