ಬೆಂಗಳೂರು –
ಏನಾಯಿತು ಎಲ್ಲಿಗೆ ಬಂತು 7ನೇ ವೇತನ ಆಯೋಗ ಕಥೆ – ಹೇಳೊದು ಕೇಳೊದು ಆಯಿತು ಸಿಗುತ್ತಿಲ್ಲ ನಿಖರವಾದ ಭರವಸೆ ಯಾರಿಗಾದರೂ ಮಾಹಿತಿ ಇದ್ದರೆ ತಿಳಿಸಿ ಎನ್ನುತ್ತಿದ್ದಾರೆ ರಾಜ್ಯದ ನೌಕರರು ಹೌದು ರಾಜ್ಯದ ಸಮಸ್ತ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ಈಗಾಗಲೇ 7ನೇ ವೇತನ ಆಯೋಗ ವನ್ನು ರಚನೆ ಮಾಡಲಾಗಿದೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಈ ಒಂದು ಆಯೋಗವನ್ನು ರಚಿಸಿತ್ತು ಸಮಿತಿಗೆ ಮತ್ತೆ 6 ತಿಂಗಳ ಅವಧಿಯನ್ನು ಮೊದಲು ವಿಸ್ತರಣೆ ಯನ್ನು ಮಾಡಿತು.ನಂತರ ರಾಜ್ಯದಲ್ಲಿ ಅಧಿಕಾ ರಕ್ಕೆ ಬಂದ ಕಾಂಗ್ರೇಸ್ ಸರ್ಕಾರವು ಈ ಒಂದು ವಿಚಾರ ಕುರಿತಂತೆ ಸಮಿತಿಯ ಅವಧಿಯನ್ನು ಮತ್ತೆ 6 ತಿಂಗಳು ಕಾಲ ವಿಸ್ತರಣೆಯನ್ನು ಮಾಡಿತು
ಈಗಾಗಲೇ ಸುಧಾಕರ್ ನೇತ್ರತ್ವದಲ್ಲಿನ ಸಮಿತಿ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಎಲ್ಲಾ ಮಾಹಿತಿಯನ್ನು ಕೂಡಾ ಪಡೆದುಕೊಂಡು ವರದಿಯನ್ನು ಕೂಡಾ ಸಿದ್ದ ಮಾಡಿದೆ.ರಾಜ್ಯ ಸರ್ಕಾರ ಈ ಒಂದು ವರದಿಯನ್ನು ಸ್ವೀಕಾರ ಮಾಡಿದರೆ ಅದನ್ನು ಕೂಡಲೇ ಜಾರಿಗೆ ತರಬೇಕು ಮಾಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಈವರೆಗೆ ಸಮಿತಿಯಿಂದ ವರದಿಯನ್ನು ತಗೆದು ಕೊಳ್ಳುತ್ತಿಲ್ಲ
ಹೀಗಾಗಿ ಸಮಿತಿಗೆ 6 ತಿಂಗಳು ಕಾಲ ಅವಧಿ ಯನ್ನು ವಿಸ್ತರಣೆ ಮಾಡಲಾಗಿದೆ.ಇದೇಲ್ಲಾ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಗೊತ್ತಿರುವ ವಿಚಾರ ಪ್ರಮುಖವಾಗಿ ಇಲ್ಲಿ 7ನೇ ವೇತನ ಆಯೋಗದ ಕಥೆ ಏನಾಯಿತು ಎಲ್ಲಿಗೆ ಬಂತು ಯಾಕೇ ವಿಳಂಬವನ್ನು ಮಾಡುಲಾಗುತ್ತಿದೆ ಹೀಗೆ ಹತ್ತಾರ ಪ್ರಶ್ನೆಗಳು ಅನುಮಾನಗಳು ಹುಟ್ಟಿಕೊಂ ಡಿದ್ದು ಈ ಒಂದು ವಿಚಾರ ಕುರಿತಂತೆ ಯಾರಿಂ ದಲೂ ಕೂಡಾ ಸ್ಪಷ್ಟತೆ ನಿಖರವಾದ ಉತ್ತರ ಮಾಹಿತಿ ಸಿಗುತ್ತಿಲ್ಲ
ಹೀಗಾಗಿ ರಾಜ್ಯದ ಸರ್ಕಾರಿ ನೌಕರರು ಈ ಒಂದು ವಿಚಾರ ಕುರಿತಂತೆ ಆತಂಕಗೊಂಡಿದ್ದಾರೆ. ಸಾಮಾ ಜಿಕ ಜಾಲ ತಾಣಗಳಲ್ಲಿ ಈ ಒಂದು ವಿಚಾರ ಕುರಿ ತಂತೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.7ನೇ ವೇತನ ಆಯೋಗದ ವಿಚಾರ ಎಲ್ಲಿಗೆ ಬಂತು ಯಾರಿಗಾ ದರೂ ಮಾಹಿತಿ ಇದೇನಾ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಎಸ್ ನಿಜಕ್ಕೂ ಕೂಡಾ ಇದೊಂದು ಗೊಂದಲದ ಗೂಡಾಗಿದ್ದು ಈವರೆಗೆ ಮಾತ್ರ ಯಾರಿಂದಲೂ ಎಲ್ಲಿಂದಲೂ ನಿಖರವಾದ ಸ್ಪಷ್ಟವಾದ ಮಾಹಿತಿ ನೌಕರರಿಗೆ ಸಿಗುತ್ತಿಲ್ಲ ಹೀಗಾಗಿ ಯಾವಾಗ ಜಾರಿಗೆ ಬರುತ್ತದೆ ಎಂಬ ಅನುಮಾನ ರಾಜ್ಯದ ಸಮಸ್ತ ಸರ್ಕಾರಿ ನೌಕರರನ್ನು ಕಾಡುತ್ತಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..