ಬೆಂಗಳೂರು –
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿಚಾರದಲ್ಲಿ ವಿಷ ಬೀಜವನ್ನು ಬಿತ್ತುತ್ತಿರುವವರ ವಿರುದ್ದ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಗುಡುಗಿದ್ದಾರೆ. ಬೆಂಗಳೂರಿ ನಲ್ಲಿ ಮಾತನಾಡಿದ ಅವರು ಈವರೆಗೆ ನೌಕರರ ವಿಚಾರ ಸಮಸ್ಯೆಗಳ ಕುರಿತಂತೆ ತಮ್ಮ ಭಾಷಣದಲ್ಲಿ ಪ್ರಸ್ತಾಪವನ್ನು ಮಾಡುತ್ತಿದ್ದ ಇವರು ಸಂಘದ ವಿಚಾರದಲ್ಲಿ ಒಡೆದು ವಿಷ ಬೀಜವನ್ನು ಬಿತ್ತುತ್ತಿರುವವರ ವಿರುದ್ದ ಮಾತಿನ ಮೂಲಕ ಗುಡುಗಿದ್ದಾರೆ.
ಹೌದು ಎರಡು ದಿನಗಳ ಹಿಂದೆ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಪರಿಷತ್ ಮಹಾಸಭೆಯಲ್ಲಿ ಮಾತನಾಡಿದ ಅವರು ಭವಿಷ್ಯದಲ್ಲಿ ಭರವಸೆಯನ್ನು ಇಟ್ಟುಕೊಂಡು ನೀವು ಬಂದಿದ್ದಿರಾ.ನಿಮ್ಮ ಪರವಾಗಿ ನಾವು ಕೆಲಸ ಮಾಡಬೇಕಲ್ವಾ,ಅದನ್ನು ಬಿಟ್ಟು ಬಿಟ್ಟು ಸಭೆ ಮಾಡೊದು ರಾಜಕಾರಣ ಮಾಡೊದು ಇನ್ನೊಬ್ಬರ ಮನೆಗೆ ಹೋಗಿ ಕಲ್ಲು ಹೊಡೆಯೊದು ಯಾಕೇ ಬೇಕು.ಸ್ವಾಮಿ ನೀನು ಗಾಜಿನ ಮನೆಯಲ್ಲಿ ಇದ್ದಿಯಾ ನಿಮ್ಮ ಮನೆಯಲ್ಲಿ ದ್ದನ್ನು ತೊಳೆದುಕೊಳ್ಳಲು ಆಗುತ್ತಿಲ್ಲ ಇನ್ನೂ ಬೇರೆಯವರ ಮನೆಗೆ ಯಾಕೇ ಕೈ ಹಾಕತೀಯಾ ಎಂದರು.
ಇನ್ನೂ ಈ ಒಂದು ಸರ್ಕಾರಿ ನೌಕರರ ಸಂಘಕ್ಕೆ 100 ವರ್ಷಗಳ ಇತಿಹಾಸವಿದೆ.ಏನು ಮಾಡಕೊಳ್ಳೊಕೆ ಆಗೊದಿಲ್ಲ.ನೀನು.ಇದನ್ನೇಲ್ಲವನ್ನು ಬಿಟ್ಟು ನಿನೇನು ದೊಡ್ಡ ದಂಡನಾಯಕ ಜಾತಿ ರಾಜಕಾರಣ ಏನು ನೋಡಬೇಕು ಪ್ರೊಟೋಕಾಲ್ಸ್ ಗೊತ್ತಿಲ್ಲ ಎಂದರು.ಇನ್ನೂ ನಾನು ಕೂಡಾ ಸುಮ್ಮನೆ ಕುಳಿತುಕೊಳ್ಳೊದಿಲ್ಲ ಬೀದಿಗಿಳಿಯುತ್ತೇನೆ ನಾನು ಇನ್ನೂ ಸುಮ್ಮನೆ ಕುಳಿತುಕೊಳ್ಳೊದಕ್ಕೆ ಆಗೊದಿಲ್ಲ.ನಾನು ಬುಡಕ್ಕೆ ಕೈ ಹಾಕುತ್ತೇನೆ ಎನ್ನುತ್ತಾ ಎದುರಾಳಿಗಳಿಗೆ ಗುಡಿಗಿದರು.