This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

31 ಶಿಕ್ಷಕರಿಗೆ ನಿಯೋಜನೆ ಮಾಡಿ ನೆರವಾದ BEO – ರಾಜ್ಯಕ್ಕೆ ಮಾದರಿಯಾಗಿ ಉಳಿದವರಿಗೆ ದಾರಿ ಮಾಡಿಕೊಟ್ಟರು HD ಕೋಟೆ,ಸರಗೂರು BEO…..

WhatsApp Group Join Now
Telegram Group Join Now

ಬೆಂಗಳೂರು –

ವರ್ಗಾವಣೆ ಸಿಗದೇ ನಾಡಿನ ಮೂಲೆ ಮೂಲೆಗಳ ಲ್ಲಿನ ಶಿಕ್ಷಕರ ನೋವು ಅನುಭವಿಸುತ್ತಿರುವ ಅವರಿಗೆ ಗೊತ್ತು.ತಾವು ಒಂದು ಕಡೆ ಹೆಂಡತಿ ಮತ್ತೊಂದು ಕಡೆಗೆ ಮಕ್ಕಳು ಇನ್ನೊಂದು ಕಡೆಗೆ ತಂದೆ ತಾಯಿ ಮತ್ತೊಂದು ಕಡೆಗೆ ಊರು ಅತ್ತ ಸಂಬಂಧಿಕರು ಇತ್ತ ಹೀಗೆ ನಾಲ್ಕೈದು ದಿಕ್ಕಾಪಾಲಾಗಿ ಸಧ್ಯ ಶಿಕ್ಷಕರು ನರಕಯಾತನೆಯ ಪರಸ್ಥಿತಿಯಲ್ಲಿ ನೆಮ್ಮದಿ ಇಲ್ಲದೇ ಕರ್ತವ್ಯವನ್ನು ಮಾಡುತ್ತಿದ್ದಾರೆ.

ಯಾರಿಗೂ ಇಲ್ಲದ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕವಾದ ವರ್ಗಾವಣೆಯ ಕಾಯ್ದೆಯಿಂದ ಬೇಸತ್ತಿದ್ದು ಇವರು ಅನುಭವಿಸುತ್ತಿರುವ ನೋವು ನರಕಯಾತೆಯ ಬದುಕು ಯಾರಿಗೂ ಅರ್ಥವಾಗು ತ್ತಿಲ್ಲ ಕೇಳುತ್ತಿಲ್ಲ ಕಾಣುತ್ತಿಲ್ಲ.ಒಮ್ಮೇಯಾದರೂ ಸ್ವಂತ ಜಿಲ್ಲೆಗೆ ವರ್ಗಾವಣೆ ಕೊಡಿ ಅವಕಾಶ ಮಾಡಿಕೊಡಿ ಎಂದು ಕೇಳುತ್ತಲೆ ಇದ್ದಾರೆ ಅತ್ತ ಕೇಳಿದವರು ಸರಿ ಆಯಿತು ಮಾಡೋಣಾ ಎನ್ನುತ್ತಾ ಮೂಗಿಗೆ ಬೆಣ್ಣಿಯನ್ನು ಹಚ್ಚುತ್ತಾ ಇದ್ದಾರೆ.ಆದರೂ ಕೂಡಾ ಭರವಸೆಯನ್ನು ಇಟ್ಟುಕೊಂಡು ಕರ್ತವ್ಯ ವನ್ನು ಮಾಡುತ್ತಿದ್ದು ಇದೇಲ್ಲದರ ನಡುವೆ ಮೈಸೂರಿನ ಹೆಚ್ ಡಿ ಕೋಟಿ ಮತ್ತು ಸರಗೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಜವಾಗಿಯೂ ಶಿಕ್ಷಕರ ಸಮಸ್ಯೆಗೆ ಮನವಿಗೆ ಸ್ಪಂದಿಸಿದ್ದಾರೆ.

ಹೌದು ಶಿಕ್ಷಕರ ಮನವಿಗೆ ಬೇಡಿಕೆಗೆ ಸ್ಪಂದಿಸಿದ ಇವರು 31 ಶಿಕ್ಷಕರಿಗೆ ಕೇಳಿದ ಸ್ಥಳಕ್ಕೆ ನಿಯೋಜನೆ ಮಾಡಿ ಆದೇಶವನ್ನು ಮಾಡಿದ್ದಾರೆ. ಶೈಕ್ಷಣಿಕ ದೃಷ್ಟಿಯಿಂದ 31 ಶಿಕ್ಷಕರನ್ನು ಈ ಕೂಡಲೇ ಕರ್ತವ್ಯ ದಿಂದ ಬಿಡುಗಡೆಗೊಂಡು ನಿಯೋಜನೆ ಮಾಡಿದ ಸ್ಥಳಕ್ಕೆ ಹೋಗಿ ಹಾಜರಾಗುವಂತೆ ಆದೇಶವನ್ನು ಮಾಡಿದ್ದಾರೆ.ಸಾಮಾನ್ಯವಾಗಿ ರಾಜ್ಯದಲ್ಲಿ ಒಂದು ಕಡೆ ವರ್ಗಾವಣೆ ಇಲ್ಲದೇ ಶಿಕ್ಷಕರು ಪರದಾಡುತ್ತಿದ್ದು ಇನ್ನೊಂದು ಕಡೆಗೆ ಕೊನೆಗೆ ನಿಯೋಜನೆ ಆದರೂ ಮಾಡುವಂತೆ ಕೇಳುತ್ತಿದ್ದಾರೆ ಇವೆಲ್ಲದರ ನಡುವೆ ಹೆಚ್ ಡಿ ಕೋಟೆ ಮತ್ತು ಸರಗೂರು ಬಿಇಓ ಅವರು ಕೊನೆಯ ಪಕ್ಷದಲ್ಲಿ ನಿಯೋಜನೆ ಮಾಡಿ ನೇರವಾಗಿ ದ್ದಾರೆ.

ಸಮಸ್ಯೆಯ ಸುಳಿಯಲ್ಲಿ ಸಿಕ್ಕು ಪರದಾಡುತ್ತಿರುವ ಶಿಕ್ಷಕರಿಗೆ ತಾತ್ಕಾಲಿಕವಾಗಿ ತುಸು ನೆಮ್ಮದಿಯನ್ನು ನೀಡಿ ಉಳಿದವರಿಗೆ ದಾರಿಯನ್ನು ಮಾಡಿಕೊಟ್ಟಿ ದ್ದಾರೆ.ಇನ್ನಾದರೂ ಹೀಗೆ ಮಾಡಬಹುದಾದರೆ ದಯಮಾಡಿ ಶಿಕ್ಷಣ ಸಚಿವರೇ ಹೀಗೆ ಮಾಡಿ ಈಗಾ ಗಲೇ ವರ್ಗಾವಣೆ ಇಲ್ಲದೇ ರಾಜ್ಯದಲ್ಲಿ ಕಂಗಾಲಾಗಿ ರುವ ಶಿಕ್ಷಕರು ಇದರಿಂದಾದರೂ ಸಂತೋಷ ಗೊಂಡು ಶಿಕ್ಷಕರಿಗೆ ನಿಯೋಜನೆ ಮಾಡಿ ಅನುಕೂಲ ಮಾಡಿಕೊಟ್ಟರೇ ಗುಣಾತ್ಮಕ ಶಿಕ್ಷಣಕ್ಕೆ ಅನುಕೂಲ ಮಾಡಿ ನಾಂದಿ ಹಾಡಬಹುದು.

ಇನ್ನೂ ನಿಜವಾಗಿಯೂ ಇಂತಹ ಶಿಕ್ಷಣಾಧಿಕಾರಿ ಗಳನ್ನು ಪಡೆದ ತಾಲ್ಲೂಕಿನ ಶಿಕ್ಷಕರು ಧನ್ಯರು ಶಿಕ್ಷಣ ಸಚಿವರೇ ಈ ಬಿಇಓ ಮಾಡಿದ ಕೆಲಸವನ್ನು ನೋಡಿ ರಾಜ್ಯದ ಉಳಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಹೀತಿ ಮಾಡಬಹುದಾದರೆ ಸಾದ್ಯವಾಗುತ್ತದೆ ಆದರೂ ಹೇಳಿ ಪುಣ್ಯವನ್ನು ಕಟ್ಟಿಕೊಂಡು ನೆರವಾಗಿ
ಸದ್ದಿಲ್ಲದೇ


Google News

 

 

WhatsApp Group Join Now
Telegram Group Join Now
Suddi Sante Desk