ಧಾರವಾಡ –
ರಾಜ್ಯ ದಲ್ಲಿ ಯೆ ಎರಡನೇ ದೊಡ್ಡ ಮಹಾನಗರ ಪಾಲಿಕೆ ಯಾಗಿದೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ. ಪಾಲಿಕೆ ಗೆ ಆಯುಕ್ತ ರಾಗಿ ಡಾ ರುದ್ರೇಶ ಘಾಳಿ ಬಂದ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಸುಧಾರಣೆ ಯಾಗಿದೆ ಈ ಒಂದು ನಡುವೆ ಇನ್ನೂ ಕೂಡಾ ಕೆಲವೊಂದಿಷ್ಟು ಸಮಸ್ಯೆ ಗಳು ಆಗ್ತಾ ಇವೆ ಎಂಬೊದಕ್ಕೆ ಧಾರವಾಡ ದ ಜರ್ಮನ್ ಆಸ್ಪತ್ರೆ ಯ ಸರ್ಕಲ್ ತಾಜಾ ಉದಾಹ ರಣೆಗೆ
ಹೌದು ಅವಳಿ ನಗರದಲ್ಲಿ ಕಳೆದ ವಾರ ಅತಿಕ್ರಮಣ ಅಂಗಡಿ ಮುಂಗಟ್ಟುಗಳನ್ನು ತೆರುವು ಮಾಡಲಾಗಿದ್ದು ಎಲ್ಲವೂ ಸ್ವಚ್ಛ ಸುಂದರ ವಾಗುತ್ತಿದೆ ಎನ್ನುವಷ್ಟರಲ್ಲಿ ಜರ್ಮನ್ ಸರ್ಕಲ್ ನಲ್ಲಿ ರಾತ್ರೋರಾತ್ರಿ ಅಂಗಡಿ ಯೊಂದು ಬಂದಿದೆ ಪಾದುಕೆ ಕುಟೀರ ಹೆಸರಿನ ಒಂದು ಮಳಿಗೆಯನ್ನು ತಂದು ಇಡಲಾಗಿದೆ ಈಗಾಗಲೇ ಸಧ್ಯ ಈ ಒಂದು ಸರ್ಕಲ್ ನಲ್ಲಿ ಹತ್ತಕ್ಕೂ ಹೆಚ್ಚು ಅಂಗಡಿಗಳಿದ್ದು ಇದರ ನಡುವೆ ಬೆಳಗಾಗುವಷ್ಟರಲ್ಲಿ ಮತ್ತೊಂದು ಅಂಗಡಿ ಯೊಂದನ್ನು ತಂಡು ಇಡಲಾಗಿದೆ
ಪಾದುಕೆ ಕುಟೀರ ಹೆಸರಿನ ಈ ಒಂದು ಅಂಗಡಿ ಏನೋ ಬಂದಿದೆ ಆದರೆ ಹೆಸರಿಗೆ ತಕ್ಕಂತೆ ವ್ಯಾಪಾರ ಮಾಡೊದನ್ನು ಬಿಟ್ಟು ಹೆಸರು ಒಂದು ವ್ಯಾಪಾರ ಮತ್ತೊಂದು ಎಂಬಂತಾಗಿದೆ ಪಾದುಕೆ ಕುಟೀರ ದಲ್ಲಿ ಸಧ್ಯ ಜರ್ಕಿನ್ ಗಳನ್ನು ಮಾರಾಟ ಮಾಡಲಾಗುತ್ತದೆ ಪಾದುಕೆ ಕುಟೀರ ಎಂಬ ಅಂಗಡಿ ಯಲ್ಲಿ ಸಧ್ಯ ಪಾದಕ್ಕೆ ಮಾರಾಟ ಬಿಟ್ಟು ಜರ್ಕಿನ್ ಸೇರಿದಂತೆ ಬೇರೆ ಬೇರೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ
ಇನ್ನೂ ಅವಳಿ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾರು ಯಾರು ಏನು ಮಾಡ್ತಾ ಇದ್ದಾರೆ ಏನು ಏಂಬೊದನ್ನು ನೋಡಬೇಕಾದ ಪಾಲಿಕೆಯ ಅಧಿಕಾರಿಗಳು ಕೈಯನ್ನು ಬಿಸಿ ಬಿಸಿ ಮಾಡಿಕೊಂಡು ಸುಮ್ಮನೆ ಕುಳಿತಿದ್ದಾರೆ ಎಂಬ ಪಶ್ನೇಯನ್ನು ಸಾರ್ವಜನಿಕರು ಕೇತ್ತಾ ಇದ್ದಾರೆ.
ಇನ್ನೂ ಈ ಒಂದು ಅಂಗಡಿಗಳನ್ನು ಇನ್ನಾದರೂ ನೋಡಿ ಪಾಲಿಕೆಯ ಅಧಿಕಾರಿಗಳು ಹೆಸರನ್ನು ಒಂದು ಹಾಕಿ ಬಾಡಿಗೆ ಕೊಟ್ಟಿರುಔರ ಮೇಲೆ ಕ್ರಮ ಕೈಗೊಳ್ಳುತ್ತಾರೆಯಾ ಅಥವಾ ಅಂಗಡಿ ತಗೆಯುತ್ತಾರೆಯಾ ಅಥವಾ ಮೌನ ವಾಗುತ್ತಾರೆ ಎಂಬೊಂದನ್ನು ಕಾದು ನೋಡಬೇಕ
ಪ್ರಮೋದ್ ಕಪಲಿಸು
ದ್ದಿ ಸಂತೆ ನ್ಯೂಸ್ ಧಾರವಾಡ



