ಬೆಂಗಳೂರು –
ಹೌದು ಏಳು ಜನ ಕೆಎಸ್ಪಿಎಸ್ ಪೊಲೀಸ್ ಅಧಿಕಾರಿ ಗಳಿಗೆ ಐಪಿಎಸ್ಗೆ ಬಡ್ತಿಯನ್ನು ನೀಡಲಾಗಿದೆ.ಕರ್ನಾಟಕ ರಾಜ್ಯ ಪೊಲೀಸ್ ಸೇವೆಯ (ಕೆಎಸ್ಪಿಎಸ್) ಏಳು ಅಧಿಕಾರಿಗಳಿಗೆ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಬಡ್ತಿ ನೀಡಲಾಗಿದೆ.
ಸಚಿನ್ ಘೋರ್ಪಡೆ, ಅಮಟೆ ವಿಕ್ರಂ, ಸಜಿತ್ ವಿ. ಜೆ, ರಾಮ್ ಲಕ್ಷ್ಮಣಸಾ ಅರಸಿದ್ದಿ, ಬಾಬಾಸಾಬ್ ನೇಮಗೌಡ, ಗೋಪಾಲ್ ಬಿ.ಬ್ಯಾಕೋಡ, ಮಹಾನಿಂಗ ನಂದಗಾನ್ವಿ ಬಡ್ತಿ ಪಡೆದ ಅಧಿಕಾರಿಗಳಾಗಿದ್ದಾರೆ.2021ನೇ ಸಾಲಿನ ಆಯ್ಕೆ ಪಟ್ಟಿಯಲ್ಲಿ ಬಡ್ತಿ ನೀಡಲು ಜುಲೈ 25ರಂದು ಆಯ್ಕೆ ಸಮಿತಿ ಸಭೆ ನಡೆದಿತ್ತು.
ಇದೀಗ ಕೇಂದ್ರ ಲೋಕಸೇವಾ ಆಯೋಗ ಈ ಎಲ್ಲಾ ಅಧಿಕಾರಿಗಳಿಗೆ ಐಪಿಎಸ್ ಶ್ರೇಣಿಗೆ ಬಡ್ತಿ ನೀಡಿ ಅಧಿಸೂ ಚನೆ ಹೊರಡಿಸಿದೆ.ಈ ಅಧಿಕಾರಿಗಳು ಕರ್ನಾಟಕ ರಾಜ್ಯ ಕೇಡರ್ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.