ಶಿಕ್ಷಕಿ ನಿಧನ – ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ಮಲಾ ಟೀಚರ್

Suddi Sante Desk

ಮೈಸೂರು –

ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಹಿರಿಯ ಆದರ್ಶ ಶಿಕ್ಷಕಿಯೊಬ್ಬರು ನಿಧನರಾಗಿದ್ದಾರೆ. ಹೌದು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಿಕ್ಷಕಿ ನಿರ್ಮಲಾ ಅವರೇ ಮೃತರಾದವರಾಗಿದ್ದಾರೆ.ಮೈಸೂರಿನ GLPS ಇಲವಾಲದ ಉರ್ದು ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಇವರು ಹಿರಿಯ ಶಿಕ್ಷಕಿ ಯಾಗಿದ್ದರು.

ನಿರ್ಮಲಾ ಟೀಚರ್ ಅಂದರೆ ಶಾಲೆಯಲ್ಲೂ ಹಾಗೇ ಮಕ್ಕಳಿಗೂ ಕೂಡಾ ಗ್ರಾಮದಲ್ಲಿ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಹೆಸರಾಗಿದ್ದು ತುಂಬಾ ಉತ್ಸಾಹಿ ಹಾಗೇ ಆದರ್ಶರಾಗಿದ್ದರು.ಕಳೆದ ಹಲವು ದಿನಗಳಿಂದ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

ಮೃತರಾದ ಈ ಹಿರಿಯ ಶಿಕ್ಷಕಿಯವರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು,ಶಿಕ್ಷಕಿಯರು ಭಾವಪೂರ್ಣ ಸಂತಾಪವನ್ನು ಸೂಚಿಸಿ ನಮನವನ್ನು ಸಲ್ಲಿಸಿದ್ದಾರೆ.ಹಾಗೇ ಸರ್ಕಾರಿ ನೌಕರರ ಸಂಘದ,ಕರ್ನಾಟಕ ಗ್ರಾಮೀಣ ಶಿಕ್ಷಕರ ಸಂಘ,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಹಿಂದಿ ಶಿಕ್ಷಕರ ಸಂಘ,ಪದವೀದರ ಸಂಘ, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ,ಕರ್ನಾಟಕ ಶಿಕ್ಷಕರ ಪರಿಷತ್ತು ಸೇರಿದಂತೆ ಹಲವು ಶಿಕ್ಷಕರ ಶಿಕ್ಷಕಿಯರ ಸಂಘದಿಂದ ಮೃತರಾದ ಶಿಕ್ಷಕಿಗೆ ಭಾವ ಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.