ರಾಜ್ಯದ ಶಿಕ್ಷಕರಿಗೆ ತುರ್ತು ಗಮನಕ್ಕೆ………. ನಿಷ್ಠಾ ತರಬೇತಿ ನಿರ್ದೇಶಕರಿಂದ ಖಡಕ್ ಸಂದೇಶ

Suddi Sante Desk

ಬೆಂಗಳೂರು –

ನಿಷ್ಠಾ ತರಬೇತಿಯ ಕೊರ್ಸ್ ಗಳ ಅಂತ್ಯದಲ್ಲಿ ಬರುವ ರಸಪ್ರಶ್ನೆ ಗಳ ಉತ್ತರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಅತ್ಯಂತ ಬೇಸರದ ಸಂಗತಿಯಾ ಗಿದೆ.ಶಿಕ್ಷಕರಾಗಿ ನಾವು ನಮ್ಮ ಮೌಲ್ಯಮಾಪನವನ್ನು ಪ್ರಾಮಾಣಿಕವಾಗಿ ಮಾಡಿಕೊಳ್ಳಲು ಇರುವ ಅವಕಾಶ ಇದಾಗಿದೆ. ಆದರೆ ಇದರ ದುರ್ಬಳಕೆ ಆಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.

ಹಾಗೂ ತರಬೇತಿಯ ಉದ್ದೇಶ ಕೂಡ ಈಡೇರಿದಂತಾಗು ವುದಿಲ್ಲ ಹಾಗಾಗಿ ಇನ್ನೂ ಮುಂದೆ ಸಾಮಾಜಿಕ ಜಾಲತಾಣ ಗಳದ YouTube ,watsapp,Facebook, telegram Instagram, ಗಳಲ್ಲಿ ಯಾರಾದರೂ ನಿಷ್ಠಾ ತರಬೇತಿ ಕೊರ್ಸ್ ಗಳ ಉತ್ತರಗಳನ್ನು ಹಂಚಿಕೊಂಡಿದ್ದು ಇಲಾಖೆ ಗಮನಕ್ಕೆ ಬಂದರೆ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗು ವುದು ಎಂದು ನಿಷ್ಠಾ ತರಬೇತಿಯ ನಿರ್ದೇಶಕರು ಸಂದೇಶ ಕಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.