ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳು – ಆಯ್ಕೆಯಾದ ವರಿಗೆ ಅಭಿನಂದನೆ ಸಲ್ಲಿಕೆ…..

Suddi Sante Desk

ಬೆಂಗಳೂರು –

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆನೂತನವಾಗಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಹೌದು ಬೇರೆ ಬೇರೆ ಇಲಾಖೆಯ ನೌಕರರಿಗೆ ಈಬಾರಿ ಅವಕಾಶವನ್ನು ನೀಡಿ ನೇಮಕ ಮಾಡಲಾಗಿದೆ.

ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ಈಬಾರಿ ಅವಕಾಶವನ್ನು ನೀಡಲಾಗಿದೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನೂತನ ವಾಗಿ ಆಯ್ಕೆಯಾದ ರಾಜ್ಯ ಪದಾಧಿಕಾರಿಗಳು…..

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀನಿವಾಸ್ ತಿಮ್ಮೇಗೌಡ ಜಲಸಂಪನ್ಮೂಲ ಇಲಾಖೆ

ಗೌರವಾಧ್ಯಕ್ಷರಾಗಿ ವೆಂಕಟೇಶಯ್ಯ ಶಿಕ್ಷಣ

ಕಾರ್ಯಾಧ್ಯಕ್ಷರಾಗಿ ಮಲ್ಲಿಕಾರ್ಜುನ್ ಬಳ್ಳಾರಿ ಆರೋಗ್ಯ

ಹಿರಿಯ ಉಪಾಧ್ಯಕ್ಷರಾಗಿ ಎಮ್ ಬಿ ರುದ್ರಪ್ಪ ಲೋಕೋಪಯೋಗಿ ಇಲಾಖೆ ಬಸವರಾಜು ಎಸ್ ವಾಣಿಜ್ಯ ತೆರಿಗೆ

ಮಾನ್ಯ ರಾಜ್ಯಾಧ್ಯಕ್ಷರ ಟೀಮ್ ಗೆ ಹೊಸ ಸದಸ್ಯರು ಸೇರಿಕೊಂಡಿದ್ದು ಅವರ ನೇತೃತ್ವದಲ್ಲಿ ನಮ್ಮ ನೌಕರರ ಸಂಘವೂ ಇನ್ನೂ ಹೆಚ್ಚು ಹೆಚ್ಚು ಸೌಲಭ್ಯಗಳನ್ನು ಒದಗಿಸು ವಲ್ಲಿ ಸಫಲವಾಗಲಿ ಹಾಗೇ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಎಲ್ಲರೂ ಮೆಚ್ಚುವಂತೆ ಕಾರ್ಯನಿರ್ವಹಿಸಲೆಂದು ನಾಡಿನ ಶಿಕ್ಷಕ ಬಳಗ ಶುಭ ಹಾರೈಸಿದ್ದಾರೆ.ಕರ್ನಾಟಕ ಶಿಕ್ಷಕರ ಪರಿಷತ್ತಿನ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.