ಅಕ್ರಮ ಪಡಿತರ ಲಾರಿ ಪಲ್ಟಿ ಅಪಾರ ಪ್ರಮಾಣದ ಪಡಿತರ ಅಕ್ಕಿ ಹಾಳು…..

Suddi Sante Desk

ರಾಯಚೂರು –

ರಾಯಚೂರು ಜಿಲ್ಲೆಯಲ್ಲಿ ಪಡಿತರ ಅಕ್ಕಿ ಅಕ್ರಮ ಮಾರಾಟ ದಂಧೆ ಮುಂದುವರಿದಿದೆ.ಹೌದು ಅಕ್ರಮ ಅಕ್ಕಿ ಹೊತ್ತು ಬರ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅಮರೇಶ್ವರ ಕ್ಯಾಂಪ್ ಬಳಿ ಲಾರಿ ಪಲ್ಟಿಯಾಗಿದೆ.

ಲಾರಿಯಲ್ಲಿ ಸುಮಾರು 300-350 ಅಕ್ಕಿ ಚೀಲಗಳು ಪತ್ತೆ ಯಾಗಿದ್ದು ಹರಿದು ನೆಲಕ್ಕೆ ಬಿದ್ದು ಹಾಳಾಗಿವೆ.ಸ್ಥಳೀಯರು ಪ್ರಶ್ನಿಸ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ ಲಾರಿ ಚಾಲಕನು.

ಸಿಂಧನೂರು ಕಡೆಯಿಂದ ಬರ್ತಿದ್ದ ಅಕ್ರಮ ಪಡಿತರ ಅಕ್ಕಿ ಹೊತ್ತಿದ್ದ ಲಾರಿ.ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಲಾರಿ ಯಾರಿಗೆ ಸೇರಿದ್ದು ಅದರಲ್ಲಿನ ಅಕ್ಕಿ ಯಾರಿಗೆ ಸೇರಿದ್ದು ಎಲ್ಲಿಗೆ ಎಲ್ಲಿಗೆ ಹೋಗುತ್ತಿತ್ತು ಈ ಕುರಿತು ಪೊಲೀಸರು ತನಿಖೆ ಮಾಡತಾ ಇದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.