ವರ್ಗಾವಣೆ ಯಲ್ಲಿ ಸಿಗದ ನ್ಯಾಯ ಸಂಘದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿಕ್ಷಕ ಒಬ್ಬರೇ ಒಬ್ಬರು ಶಿಕ್ಷಕರಿಗೆ ವರ್ಗಾವಣೆ ಕೊಡಿಸಲು ವಿಫಲ ವಾಗಿದ್ದು ಬೇಸರ ತಂದಿದೆ ಎಂದರು

Suddi Sante Desk

ರಾಯಚೂರು –

ಶಿಕ್ಷಕರಿಂದ ಆಯ್ಕೆಯಾದ ನನ್ನಿಂದ ಈ ಒಂದು ವರ್ಗಾ ವಣೆಯಲ್ಲಿ ಅವರಿಗೆ ಅದರಲ್ಲೂ ಒಬ್ಬರೇ ಒಬ್ಬರಿಗೆ ವರ್ಗಾವಣೆ ಮಾಡಿಸಲು ಆಗಲಿಲ್ಲ ಎಂಬ ಕಾರಣಕ್ಕಾಗಿ ರಾಜ್ಯದಲ್ಲಿ ಮತ್ತೋರ್ವ ಶಿಕ್ಷಕ ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಹೌದು ಒಂದು ಕಡೆ ಈ ಒಂದು ವರ್ಗಾವಣೆಯಲ್ಲಿ ಶಿಕ್ಷಕರಿಗೆ ಸರಿಯಾಗಿ ಸಿಗದ ನ್ಯಾಯ ಸಿಗಲಿಲ್ಲ ಹೀಗಾಗಿ ಈ ಒಂದು ಅನ್ಯಾಯದಿಂದ ಬೇಸರ ದಿಂದ ಬೆಳ್ಳಂ ಬೆಳಿಗ್ಗೆ ಮತ್ತೋರ್ವ ಶಿಕ್ಷಕರೊಬ್ಬರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಮೋಹನ್ ಕುಮಾರ್ ಡಿ ನೌಕರರ ಸಂಘ ರಾಯಚೂರಿನ ಮಾನವಿ ಘಟಕ ಇವರೇ ರಾಜೀನಾಮೆ ನೀಡಿದ ಶಿಕ್ಷಕರಾಗಿದ್ದಾರೆ.

ಸಂಘದ ನಿರ್ದೇಶಕ ಸ್ಥಾನಕ್ಕೆ ಮತ್ತು ಪ್ರಾಥಮಿಕ ಸದಸ್ಯ ತ್ವದ ಸ್ಥಾನಕ್ಕೂ ರಾಜೀನಾಮೆಯನ್ನು ನೀಡಿದ್ದಾರೆ.ಮೊನ್ನೆ ಮೊನ್ನೆ ಅಷ್ಟೇ ಇಬ್ಬರು ಶಿಕ್ಷಕರು ಹೀಗೆ ರಾಜೀನಾಮೆ ನೀಡಿದ್ದರು ಇದರ ಬೆನ್ನಲ್ಲೇ ಈಗ ಮತ್ತೊರ್ವ ಶಿಕ್ಷಕ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.ತಮ್ಮ ರಾಜೀ ನಾಮೆಯನ್ನು ತಾಲೂಕಿನ ಅಧ್ಯಕ್ಷರಿಗೆ ಪತ್ರವನ್ನು ಬರೆದಿ ರುವ ಇವರು ವರ್ಗಾವಣೆಯ ವಿಚಾರದಲ್ಲಿ ತಮಗೆ ಆಗಿ ರುವ ನೋವಿನ ಕುರಿತಂತೆ ಸುಧೀರ್ಘವಾಗಿ ಉಲ್ಲೇಖ ವನ್ನು ಮಾಡಿ ಶಿಕ್ಷಕ ಸ್ನೇಹಿ ಅಲ್ಲದ ಈ ಒಂದು ವರ್ಗಾವಣೆ ಯಿಂದ ಬೇಸತ್ತು ಹಾಗೇ ಸಂಘದ ಸದಸ್ಯರ ಮೃದು ಧೋರಣೆಯಿಂದ ಬೇಸತ್ತು ಹುದ್ದೆಗೆ ಮತ್ತು ಸದಸ್ಯತ್ವಕ್ಕೆ ರಾಜೀನಾಮೆ ಯನ್ನು ನೀಡೊದಾಗಿ ಹೇಳಿದರು. ಇದರೊಂ ದಿಗೆ ಸಂಘದ ನಾಯಕರ ವಿರುದ್ದವೇ ಅದೇ ಸಂಘದ ತಾಲ್ಲೂಕಿನ ಸದಸ್ಯರು ನಾಯಕರು ಸಿಡಿದೆದ್ದಿದ್ದು ಇನ್ನಾದ ರೂ ಈ ಒಂದು ಘಟನೆಯಿಂದ ಎಚ್ಚೇತ್ತುಕೊಳ್ಳುತ್ತಾರೆನಾ ಅಥವಾ ಮೌನವಾಗಿರುತ್ತಾರೆನಾ ಎಂಬೊದನ್ನು ಕಾದು ನೋಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.