ವರ್ಗಾವಣೆಯ ವಿಚಾರದಲ್ಲಿ ಆಯುಕ್ತರನ್ನು ಭೇಟಿಯಾಗಲು ತೀರ್ಮಾನ ಕೈಗೊಂಡ ಶಿಕ್ಷಕರು ದಯಮಾಡಿ ಗುರುವಾರ ಆಯುಕ್ತ ರ ಕಚೇರಿಗೆ ಬನ್ನಿ ಎಂದು ಕರೆ ಕೊಟ್ಟ ಶಿಕ್ಷಕರು…..

Suddi Sante Desk

ಬೆಂಗಳೂರು –

ಈಗಾಗಲೇ ಹತ್ತು ಹಲವಾರು ಸಮಸ್ಯೆಗಳ ನಡುವೆ ಸಿಕ್ಕ ಒದ್ದಾಡುತ್ತಿರುವ ನಾಡಿನ ಶಿಕ್ಷಕರ ನೋವು ಸಮಸ್ಯೆ ಸಂಕಷ್ಟ ನರಕಯಾತನೆಯನ್ನು ಯಾರು ಕೇಳುತ್ತಿಲ್ಲ ನೋಡುತ್ತಿಲ್ಲ ಆಲಿಸುತ್ತಿಲ್ಲ ಶಿಕ್ಷಕರ ಧ್ವನಿಯಾಗಿರುವ ಶಿಕ್ಷಕರ ಸಂಘಟನೆಯ ನಾಯಕರು ಮಾತ್ರ ಮೌನವಾಗಿದ್ದಾರೆ ಹೀಗಾಗಿ ಬೇಸತ್ತ ಶಿಕ್ಷಕರು ಈಗ ಪತಿ-ಪತ್ನಿ ವರ್ಗಾವಣೆಯ ಪ್ರಕರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ನ್ನು ಭೇಟಿಯಾಗಲು ತಿರ್ಮಾನವನ್ನು ಕೈಗೊಂಡಿದ್ದಾರೆ.

ಹೌದು ಜಿಲ್ಲೆಯ ಹೊರಗೆ ವಿಭಾಗದೊಳಗೆ ಈಗಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಏನೇಲ್ಲಾ ಕಾರ್ಯ ಮಾಡಿದರು ಕೂಡಾ ವ್ಯರ್ಥವಾಗುತ್ತದೆ ಹೀಗಾಗಿ KAT ಗೂ ಹೋಗಿ ತಡೆಯಾಜ್ಞೆ ತಗೆದುಕೊಂಡು ಬಂದರೂ ಕೂಡಾ ವರ್ಗಾವ ಣೆಯಲ್ಲಿ ಅವಕಾಶ ನೀಡಬೇಕು ಎಂಬ ವಾದ-ವಿವಾದಗಳು 20ನೇ ತಾರೀಕಿನ ಒಳಗಡೆ ಸಾಧ್ಯವಿಲ್ಲ.ಹೀಗಾಗಿ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಶಾಲ್ ಅವರನ್ನು ಭೇಟಿ ಮಾಡಿ ನಮ್ಮ ಸಮಸ್ಯೆಗಳನ್ನು ತಿಳಿಸಲು ಮುಂದಾಗಿದ್ದಾರೆ.

ಪ್ರೌಢಶಾಲಾ ಶಿಕ್ಷಕರಿಗೆ ಈ ಹಿಂದೆ ಪಕ್ಕದ ಜಿಲ್ಲೆಗಳನ್ನೇ ತೋರಿಸುತ್ತಿದ್ದರು ಆದರೆ ಜಿಲ್ಲೆಯ ಒಳಗಡೆ ಆದರೂ ನೀಡಿ ಎನ್ನುತ್ತಾ ದಯಮಾಡಿ ಸಹಕರಿಸಿ ಎಂದು ಮನವಿಯನ್ನು ಮಾಡಿದರೆ ನಷ್ಟವೇನೂ ಇಲ್ಲ ಎಂದುಕೊಂಡು ಸಮಸ್ಯೆ ಗಳನ್ನು ಹೊತ್ತುಕೊಂಡು ಗುರುವಾರದಂದು ಆಯುಕ್ತರ ಕಛೇರಿ ಬೆಂಗಳೂರು ಗೆ ಹೋಗಲು ತೀರ್ಮಾನವನ್ನು ತಗೆದುಕೊಂಡಿದ್ದಾರೆ‌.ಹೀಗಾಗಿ ದಯಮಾಡಿ ಸಾಧ್ಯವಾ ದಷ್ಟು ಸಹೋದ್ಯೋಗಿಗಳು ಬನ್ನಿ ಒಂದೇ ಒಂದು ದಿನ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳೋಣ ಎಲ್ಲರಿಗೂ ಸಹಾಯವಾಗುತ್ತದೆ.ನಮಗೆ ಇರುವ ಒಂದೇ ಒಂದು ಅವಕಾಶವೆಂದರೆ ಇದೇ ಎಂದು ಶಿಕ್ಷಕರು ಕರೆ ಕೊಟ್ಟಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.