ಬೆಂಗಳೂರು –
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿ ಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಏಳು ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ವರ್ಗಾವಣೆಗೊಂಡ ಅಧಿಕಾರಿ ಗಳ ವಿವರ ಈ ಕೆಳಗಿನಂತಿದೆ. ರಾಜು ಮೊಗವೀರ ಕೆ. – ಅಪರ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾ ದಂಡಾಧಿಕಾರಿ ಕೊಡಗು ಜಿಲ್ಲೆ, ಡಾ.ರೂಪಶ್ರೀ ಎಸ್.- ಜಂಟಿ ಆಡಳಿತ ನಿದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಬೆಂಗಳೂರು, ವಿಜಯ್ಕುಮಾರ್ ಹೊನಕೇರಿ- ಪ್ರಾಂಶುಪಾಲರು ಜಿಲ್ಲಾ ತರಬೇತಿ ಸಂಸ್ಥೆ ಬೆಳಗಾವಿ, ಎಲ್.ಸಿ. ನಾಗರಾಜು-ಆಡಳಿತ ಅಧಿಕಾರಿ, ಸಕಾಲ ಮಿಷನ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ.

ಪ್ರಸನ್ನಕುಮಾರ್ ವಿ.ಕೆ.- ವಿಶೇಷ ಭೂಸ್ವಾಧೀನಾಧಿಕಾರಿ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಚಿತ್ರದುರ್ಗ ಜಿಲ್ಲೆ, ವೆ.ಎನ್.ಚಂದ್ರಮ್ಮ-ವಲಯ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ ಮೈಸೂರು, ಖಾಝಿ ನಫೀಸ-ಸಹಾಯಕ ಆಯುಕ್ತರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬೆಂಗಳೂರು ಇಲ್ಲಿಗೆ ನಿಯೋಜನೆ ಮಾಡಿ ಸರಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ