ಕೇಂದ್ರ ಸರ್ಕಾರದ ಮಾದರಿಯಲ್ಲೇ ವೇತನ ನೀಡದಿದ್ದರೆ ಆಡಳಿಯ ವ್ಯವಸ್ಥೆ ಸ್ಥಬ್ದ ಷಡಕ್ಷಾರಿ ಎಚ್ಚರಿಕೆ ವಿವಿಧ ಇಲಾಖೆಗಳ ಅಧಿಕಾರಿ, ನೌಕರರಿಗೆ ಉತ್ತಮ ಸೇವಾ ರತ್ನ ಪ್ರಶಸ್ತಿ ಪ್ರದಾನ…..

Suddi Sante Desk

ಚಿತ್ತಾಪುರ –

ಕೇಂದ್ರ ಸರ್ಕಾರದ ಮಾದರಿಯಲ್ಲೇ ವೇತನ ನೀಡದಿದ್ದರೆ ಆಡಳಿಯ ವ್ಯವಸ್ಥೆ ಸ್ಥಬ್ದವಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಹೇಳಿದರು.ಚಿತ್ತಾಪುರ ದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಇಲಾಖೆಗಳ ಅಧಿಕಾರಿ,ನೌಕರರಿಗೆ ಉತ್ತಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾ ಡಿದರು.ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ವೇತನ ಆಯೋಗದ ಪ್ರಕಾರ ವೇತನ ನೀಡಬೇಕು.ಇಲ್ಲವಾದರೆ ನೌಕರರು ಕೆಲಸ ನಿಲ್ಲಿಸಿದರೆ ಇಡೀ ಆಡಳಿತ ವ್ಯವಸ್ಥೆ ಸ್ತಬ್ಧ ವಾಗುತ್ತದೆ ಎಂದರು.ಇದೇ ವೇಳೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು

ದೇಶದ 24 ರಾಜ್ಯಗಳ ಸರ್ಕಾರಿ ನೌಕರರು ಕೇಂದ್ರ ವೇತನ ಆಯೋಗದ ಪ್ರಕಾರ ವೇತನ ಪಡೆಯುತ್ತಿದ್ದಾರೆ. ಅತ್ಯಂತ ಕಡಿಮೆ ವೇತನ ಪಡೆಯುವ ನೌಕರರು ಎಂದರೆ ಕರ್ನಾಟಕ ರಾಜ್ಯದವರು.ಕೇಂದ್ರದ ಮಾದರಿ ವೇತನ ನೀಡದಿದ್ದರೆ ಬರುವ ಜುಲೈ ತಿಂಗಳಲ್ಲಿ ಸಂಘದಿಂದ ಹೋರಾಟ ಮಾಡು ವುದು ಅನಿವಾರ್ಯವಾಗುತ್ತದೆ ಎಂದರು.ಈ ಬಗ್ಗೆ ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತರಲಾಗುತ್ತದೆ.ಈ ತಿಂಗಳಾಂ ತ್ಯದ ಒಳಗೆ ತಹಶೀಲ್ದಾರ್‌ಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಸಲಾಗುತ್ತದೆ.ಹೊಸ ಪಿಂಚಣಿ ಯೋಜನೆ ಯನ್ನು ಸರ್ಕಾರ ಕೈ ಬಿಡಬೇಕು.ಈ ಕುರಿತು ನೌಕರರ ಸಮಸ್ಯೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಭ್ರಷ್ಟಾ ಚಾರ ಕಡಿಮೆ ಆಗಬೇಕಾದರೆ ಮತ್ತು ಅಧಿಕಾರಿಗಳು ದಾರಿ ತಪ್ಪದಂತೆ ತಡೆಯಬೇಕಾದರೆ ನೌಕರರಿಗೆ ಉತ್ತಮ ಸೌಲಭ್ಯ ಒದಗಿಸುವುದು ಸರ್ಕಾರದ ಮುಖ್ಯ ಕರ್ತವ್ಯ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.