ಶೀಘ್ರದಲ್ಲೇ ತಾಲ್ಲೂಕು ಜಿಲ್ಲಾ ಪಂಚಾಯತ ಚುನಾವಣೆ ಕೆ ಎಸ್ ಈಶ್ವರಪ್ಪ – ಮೂರು ತಿಂಗಳ ಲ್ಲಿಯೇ ಪ್ರಕ್ರಿಯೆ ಮುಗಿಯಲಿದೆ ಎಂದರು ಸಚಿವರು…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಮೂರು ತಿಂಗಳಲ್ಲಿಯೇ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು ಬೆಂಗಳೂರಿನಲ್ಲಿ ಮಾತನಾಡಿದ ಅವರು 2022ರ ಮಾರ್ಚ್ ಒಳಗೆ ಅಂದರೆ ಮೂರು ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆ ಯಿದ್ದು ಕ್ಷೇತ್ರಗಳ ಪುನರ್ವಿಂಗಡನೆ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು ಬಹುತೇಕ ಕ್ಷೇತ್ರಗಳಲ್ಲಿ ಯಾವುದೇ ಬದಲಾ ವಣೆ ಆಗುವುದಿಲ್ಲ ಗಡಿ ಮಾತ್ರ ಬದಲಾವಣೆ ಆಗುತ್ತದೆ ಎಂದರು.

ಇನ್ನೂ ದೇಗುಲಗಳನ್ನು ಕಟ್ಟುಪಾಡುಗಳಿಂದ ಮುಕ್ತ ಗೊಳಿ ಸುವ ವಿಚಾರದ ಬಗ್ಗೆ ಮಾತನಾಡಿದ ಅವರು ದೇಗುಲದಲ್ಲಿ ಹಣ ಇದ್ದರೂ ದೇಗುಲಕ್ಕೆ ಬಳಸಲು ಅವಕಾ ಶವಿಲ್ಲ ಸರ್ಕಾರ ಆ ಹಣಕ್ಕೆ ಕೈಹಾಕದೆ ಭಕ್ತರು ಆಯ್ಕೆ ಮಾಡುವ ಸಮಿತಿಗೆ ಹಣ ಬಳಕೆಯ ವಿವೇಚನೆ ಸಿಗುವಂತೆ ಆಗ ಬೇಕು.ಶೀಘ್ರದಲ್ಲೇ ಸಮಿತಿಗಳಿಗೆ ಹೆಚ್ಚು ಅಧಿಕಾರಕೊಡುವ ವ್ಯವಸ್ಥೆಯನ್ನು ನಾವು ರೂಪಿಸುತ್ತೇವೆ ಎಂದು ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.