ಅಧಿಕಾರಿಗಳಿಗೆ ಭಡ್ತಿ ಬೆನ್ನಲ್ಲೇ ಸಿಡಿದೆದ್ದ ನಾಡಿ‌ನ ಶಿಕ್ಷಕರು ಅತ್ತ ಅಧಿಕಾರಿಗಳಿಗೆ ನೇರವಾಗಿ ಭಡ್ತಿ ಅಕ್ಷರ ಕಲಿಸುವ ಶಿಕ್ಷಕರಿಗೆ ಪರೀಕ್ಷೆ ಇದ್ಯಾವ ನ್ಯಾಯ…..

Suddi Sante Desk

ಬೆಂಗಳೂರು –

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಭಡ್ತಿ ನೀಡಲಾಗಿದೆ.ಇಲಾಖೆಯಲ್ಲಿ BEO ಆಗಿದ್ದ ಕೆಲ ಅಧಿಕಾರಿ ಗಳಿಗೆ ನಿರ್ದೇಶಕರ ಹುದ್ದೆಗೆ ಭಡ್ತಿ ನೀಡಿ ವರ್ಗಾವಣೆ ನೀಡಲಾಗಿದ್ದು ಈ ಒಂದು ಪಟ್ಟಿ ಹೊರಗೆ ಬರುತ್ತಿದ್ದಂತೆ ನಾಡಿನ ಶಿಕ್ಷಕರ ಅಸಮಾಧಾನ ಸ್ಫೋಟ ಗೊಂಡಿದೆ ಹೌದು ಈ ಒಂದು ಭಡ್ತಿ ಆದೇಶ ಹೊರಬೀಳುತ್ತಿದ್ದಂತೆ ಇದರ ಬೆನ್ನಲ್ಲೇ ರಾಜ್ಯದ ಶಿಕ್ಷಕರು ಸಿಡಿದೆದ್ದಿದ್ದಾರೆ‌

ಹೌದು ಅಧಿಕಾರಿಗಳಿಗೆ ಭಡ್ತಿ ನೀಡುವ ಕುರಿತು ಬೇಸರ ವನ್ನು ವ್ಯಕ್ತಪಡಿಸಿದ್ದಾರೆ‌ ನಾಡಿ‌ನ ಶಿಕ್ಷಕರು ಅಧಿಕಾರಿಗಳಿಗೆ ಸೇವಾ ಜೇಷ್ಠತೆಯ ಮೇಲೆ ಭಡ್ತಿ ನೀಡತಾರೆ ಆದರೆ ಶಿಕ್ಷಕರಿಗೆ ಏಕೆ ಈ ಒಂದು ತಾರತಮ್ಯ ಎಂದು ಪ್ರಶ್ನೆ ಮಾಡಿದ್ದಾರೆ ಒಂದು ಅಧಿಕಾರಿಗಳಿಗೆ ನೇರವಾಗಿ ಭಡ್ತಿ ಅಕ್ಷರ ಕಲಿಸುವ ಶಿಕ್ಷಕರಿಗೆ ಪರೀಕ್ಷೆ ಇದ್ಯಾವ ನ್ಯಾಯ…..

ಅಧಿಕಾರಿಗಳಿಗೆ ನೇರವಾಗಿ ಭಡ್ತಿ ನೀಡತಾರೆ ಆದರೆ ನಮಗೆ ಯಾಕೇ ಹೀಗೆ ಈ ಒಂದು ತಾರತಮ್ಯ ಎಂದು ರಾಜ್ಯದ ಶಿಕ್ಷಕರು ಪ್ರಶ್ನೆಯನ್ನು ಮಾಡಿದ್ದಾರೆ ಅಲ್ಲದೇ ಇದು ಸರಿಯಾ ದ ಕ್ರಮವಲ್ಲ ಎನ್ನುತ್ತಾ ರಾಜ್ಯದ ಶಿಕ್ಷಕರು ಈಗ ಬೇಸರದ ಮಾತುಗಳನ್ನು ಹೇಳತಾ ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಆಕ್ರೋಶದ ಅಸಮಾಧಾನವನ್ನು ವ್ಯಕ್ತಪಡಿಸುತ್ತಿ ದ್ದಾರೆ

ಒಟ್ಟಾರೆ ಶಿಕ್ಷಕರಿಗೆ ಸಧ್ಯ ಇಂತಹ ಪರೀಕ್ಷಾ ಸಮಯ ಬಂದಿದ್ದು ಹೀಗಾಗಿ ಅವರು ಈ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು ಇದನ್ನು ಇಲಾಖೆಯ ಅಧಿಕಾರಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.