ವೀಕೆಂಡ್ ಕರ್ಫ್ಯೂ ರದ್ದು ನೈಟ್ ಕರ್ಫ್ಯೂ ಮುಂದುವರಿಕೆ – ಮುಖ್ಯ ಮಂತ್ರಿ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಹಲವು ವಿಚಾರಗಳ ಕುರಿತಂತೆ ತಿರ್ಮಾನ…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡಲಾಗಿದೆ. ಬಿಜೆಪಿ ಕೆಲ ನಾಯಕರು ಸೇರಿದಂತೆ ಹಲವರಿಂದ ತೀವ್ರ ವಿರೋಧಗೊಂಡ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಈ ಒಂದು ವೀಕೆಂಡ್ ಕರ್ಫ್ಯೂ ವನ್ನು ಹಿಂದೆ ಪಡೆಯಲಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾಜ್ಯದ ಕೋವಿಡ್ 19 ಸ್ಥಿತಿಗತಿ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆಯನ್ನು ಕರೆದಿದ್ದರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಒಂದು ಸಭೆಯಲ್ಲಿ ಹಲವು ವಿಚಾರಗಳ ಕುರಿ ತಂತೆ ಚರ್ಚೆಯನ್ನು ಮಾಡಿ ಕೆಲವು ವಿಚಾರಗಳನ್ನು ಹಿಂದೆ ತಗೆದುಕೊಳ್ಳಲಾಯಿತು.

ಪ್ರಮುಖವಾಗಿ ವೀಕೆಂಡ್‌ ಕರ್ಫ್ಯೂ ತೆರವು ಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ.ಸಭೆಯ ನಂತರ ಸಚಿವ ಆರ್ ಅಶೋಕ್ ಮಾಧ್ಯಮಗಳಿಗೆ ಪ್ರತಿನಿಧಿಗಳೊಂದಿಗೆ ಮಾತ ನಾಡಿ ಎಲ್ಲಾ ತಜ್ಞರ ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಗಳು ಸ್ವೀಕರಿಸಿದ್ದಾರೆ.ವೀಕೆಂಡ್‌ ಕರ್ಫ್ಯೂ ತೆರವು ಗೊಳಿ ಸುವ ತೀರ್ಮಾನ ಕೈಗೊಂಡಿದ್ದು,ನೈಟ್ ಕರ್ಫ್ಯೂ ಮುಂದು ವರಿಯಲಿದೆ.ಉಳಿದ ಎಲ್ಲ ನಿಯಮಗಳು ಮುಂದುವರಿ ಯುತ್ತದೆ ಎಂದು ತಿಳಿಸಿದರು.ನಾಳೆಯಿಂದ ವಾರಾಂತ್ಯ ಕರ್ಫ್ಯೂ ಇಲ್ಲ ಎಂದು ತಿಳಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.