ಅಖಿಲ ವೀರಶೈವ ಮಹಾಸಭಾ ದಿಂದ ಪ್ರತಿಭಟನೆ – ತಹಶಿಲ್ದಾರ ಮೇಲೆ ನಡೆದ ಹಲ್ಲೆಗೆ ಖಂಡನೆ…..

Suddi Sante Desk

ಲಿಂಗಸುಗೂರು –

ಹುಮನಾಬಾದ ತಹಶೀಲ್ದಾರ್‌ ಡಾ| ಪ್ರದೀಪ್‌ಕುಮಾರ ಹಿರೇಮಠ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಅಖೀಲ ಭಾರತ ವೀರಶೈವ ಮಹಾಸಭಾ ಮುಖಂಡರು ಲಿಂಗಸೂರಿನಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಮಹಾ ಸಭಾ ಕಚೇರಿಯಿಂದ ಬಸ್‌ ನಿಲ್ದಾಣ ಗಡಿಯಾರ ಚೌಕ್‌ ಅಂಚೆ ಕಚೇರಿ ಮೂಲಕ ಎಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ನಂತರ ತಹಶೀಲ್ದಾರ್‌ ಡಾ ಪ್ರದೀಪ ಕುಮಾರ ಮೇಲೆ ಹಾಕಿದ ಸುಳ್ಳು ಪ್ರಕರಣ ವಾಪಸ್‌ ಪಡೆದು ಪ್ರಕರಣಕ್ಕೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸಿ ರಾಹುಲ್‌ ಸುಂಕನೂರರಿಗೆ ಮನವಿ ಸಲ್ಲಿಸಲಾಯಿತು.

ಮಹಾಸಭಾ ತಾಲೂಕಾಧ್ಯಕ್ಷ ಶರಣಪ್ಪ ಮೇಟಿ, ಕಾರ್ಯ ದರ್ಶಿ ವಿರುಪಾಕ್ಷಪ್ಪ ದೇವದುರ್ಗ,ಡಾ ಶಿವಬಸಪ್ಪ ಹೆಸ ರೂರು,ಮಹಾಂತಯ್ಯ ಪಂಚಾಕ್ಷರಿಮಠ,ಸಿದ್ಧನಗೌಡ, ಗಿರಿಮಲ್ಲನಗೌಡ ಕರಡಕಲ್‌,ಮಲ್ಲಣ್ಣ ವಾರದ, ರಮೇಶ ಶಾಸ್ತ್ರೀ,ವೀರನಗೌಡ ಬಯ್ನಾಪುರ,ಚಂದ್ರಪ್ಪಗೌಡ ಯರ್ದಿ ಹಾಳ,ದೊಡ್ಡನಗೌಡ ಹೊಸಮನಿ,ವೀರನಗೌಡ ಲೆಕ್ಕಿಹಾಳ, ಬಸವರಾಜಗೌಡ ಗಣೇಕಲ್‌,ಅಮರೇಶ ನಾಡಗೌಡ, ಪ್ರಭುಸ್ವಾಮಿ ಅತ್ತನೂರು,ಸುರೇಶಗೌಡ,ಮಹಾಂತೇಶ ಪಾಟೀಲ್‌,ಜಂಬಯ್ಯ ಹಿರೇಮಠ,ಶಂಕರಗೌಡ ಹಟ್ಟಿ, ಶರಣಯ್ಯಸ್ವಾಮಿ,ನಾಗರಡ್ಡೆಪ್ಪ,ಚನ್ನಾರಡ್ಡಿ ಬಿರಾದಾರ, ಅಮರೇಶ ತಾವರಗೇರ, ರಾಜು ತಂಬಾಕೆ, ಶಿವಕುಮಾರ ನಂದಿಕೋಲ ಇತರರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.