ಶಿಕ್ಷಕಿ ಶ್ರೀಮತಿ ಕಲಾವತಿ ಕುಷ್ಟಗಿ ಇನ್ನೂ ನೆನಪು ಮಾತ್ರ ಹೃದಯಾಘಾತದಿಂದ ನಿಧನರಾದ ಶಿಕ್ಷಕಿಯ ಸಾವಿಗೆ ನಾಡಿನ ಶಿಕ್ಷಕ ಬಂಧುಗಳಿಂದ ಸಂತಾಪ…..

Suddi Sante Desk

ಮುಂಡರಗಿ –

ಮುಂಡರಗಿಯ ಶಿಕ್ಷಕರ ಸಾಹಿತಿ ಡಾ.ನಿಂಗು ಸೊಲಗಿ ಅವರ ಧರ್ಮಪತ್ನಿ ಆದರ್ಶ ಶಿಕ್ಷಕಿ ಶ್ರೀಮತಿ ಕಲಾವತಿ ಕುಷ್ಟಗಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಹೌದು ತುಂಬಾ ಉತ್ಸಾಹಿ ಮತ್ತು ಆದರ್ಶ ರಾಗಿದ್ದ ಇವರು ಮುಂಡರಗಿಯ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಇವರು ಇಂದು ಹೃದಯಾಘಾತದಿಂದ ನಿಧನರಾದರು ಇನ್ನೂ ಈ ಒಂದು ಸುದ್ದಿಯನ್ನು ಕೇಳಿ ನಾಡಿನ ಶಿಕ್ಷಕರು ದಿಗ್ಬ್ರಮೆಯನ್ನು ವ್ಯಕ್ತಪಡಿಸಿದ್ದಾರೆ

ಮೃತರಾದ ಇವರಿಗೆ ಮಕ್ಕಳಿಗೆ ದುಃಖವನ್ನು ತಡೆದುಕೊ ಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ನಾಡಿನ ಶಿಕ್ಷಕ ಬಂಧುಗಳು ತೀವ್ರವಾದ ಸಂತಾಪವನ್ನು ಸೂಚಿಸಿದ್ದಾರೆ ಹಾಗೆ ಧಾರವಾಡದ ಭಾರತ ಜ್ಞಾನ ವಿಜ್ಞಾನ ಸಮಿತಿ ತೀವ್ರ ಸಂತಾನವನ್ನು ಸೂಚಿಸಿದ್ದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಗುರು ತಿಗಡಿ ಎಲ್ ಐ ಲಕ್ಕಮ್ಮ ನವರ,ಚಂದ್ರಶೇಖರ ತಿಗಡಿ,ವೀರಣ್ಣ ಒಡ್ಡಿನ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರು ಅಶೋಕ ಸಜ್ಜನ ಪ್ರಮುಖರು ಮಲ್ಲಿಕಾ ರ್ಜುನ ಉಪ್ಪಿನ ಎನ್ ಎಂ ಕುಕನೂರ, ಮಲ್ಲಿಕಾರ್ಜುನ ಚರಂತಿಮಠ ಕಾರ್ಯಾದ್ಯಕ್ಷರು ಎಂ ವಿ ಕುಸುಮ, ಬಿವಿ ಅಂಗಡಿ ಸೇರಿದಂತೆ ಅನೇಕರು ತೀವ್ರ ಸಂತಾಪಗಳನ್ನು ಸೂಚಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.