ಸೆಲ್ಪಿ ತಗೆದುಕೊಳ್ಳುವ ಹುಚ್ಚಿದೆ ನಾಲ್ವರು ಬಲಿ – ರೈಲು ಡಿಕ್ಕಿಯಾಗಿ ನಾಲ್ವರು ಯುವಕರು ಸಾವು…..

Suddi Sante Desk

ದೆಹಲಿ –

ಸೆಲ್ಪಿ ತಗೆದುಕೊಳ್ಳುವಾಗ ರೈಲು ಡಿಕ್ಕಿಯಾಗಿ ನಾಲ್ವರು ಯುವಕರು ಬಲಿಯಾದ ಘಟನೆ ದೆಹಲಿಯಲ್ಲಿ ನಡೆದಿದೆ ಹೌದು ದೆಹಲಿಯ ಹೊರವಲಯದಲ್ಲಿರುವ ಗುರುಗ್ರಾಮ ದಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಮೇಲ್ಸೆತುವೆ ಬಳಿಯಲ್ಲಿ ಸೆಲ್ಫಿ ತೆಗೆದುಕೊಳ್ತಿದ್ದ ನಾಲ್ವರು ಯುವಕರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ರೈಲ್ವೆ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಸಂಜೆ ಐದು ಗಂಟೆ ಸುಮಾರಿಗೆ ಬಸಾಯಿ ರೈಲ್ವೆ ನಿಲ್ದಾಣಕ್ಕೆ ದೆಹಲಿಯ ಸರಾಯ್ ರೋಹಿಲ್ಲಾ ನಿಲ್ದಾಣದಿಂದ ಹೊರ ಟಿದ್ದ ಅಜ್ಮೀರ್ ಬೌಂಡ್ ಜನ್ಮ ಶತಾಬ್ದಿ ಟ್ರೇನಿಗೆ ಸಿಲುಕಿ ಈ ಯುವಕರು ಸಾವನ್ನಪ್ಪಿದ್ದಾರೆ.

ಇನ್ನೂ ಮೃತಪಟ್ಟ ನಾಲ್ಕೂ ಮಂದಿ 18 ರಿಂದ 21 ವರ್ಷ ಪ್ರಾಯದವರು ಎಂದು ತಿಳಿದುಬಂದಿದೆ. ಸೆಲ್ಫಿಯಲ್ಲಿ ರೈಲು ಕೂಡ ಸೆರೆಯಾಗಬೇಕು ಎಂದುಕೊಂಡಿದ್ದ ಈ ಯುವಕರು ರೈಲ್ವೆ ಹಳಿಯ ಮೇಲೆಯೇ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದರು. ರೈಲು ಹತ್ತಿರ ಬಂದಿರುವುದು ಗಮನಕ್ಕೆ ಬಂದಿದ್ದರೂ ಸಹ ಫೋಟೋದಲ್ಲಿ ರೈಲು ಕೂಡ ಕಾಣಿಸುತ್ತದೆ ಎಂಬ ಕಾರಣಕ್ಕೆ ಸೆಲ್ಫಿ ಕ್ಲಿಕ್ಕಿಸುತ್ತಲೇ ಇದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.